ನವದೆಹಲಿ: ಕೇಂದ್ರ ಸರ್ಕಾರ ಸರಕು ವಾಹನಗಳ ವಿಳಂಬವನ್ನು ಕತ್ತರಿಸಿ, ಅವುಗಳ ನಿರಂತರ ಓಡಾಟ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಉದ್ಯೋಗ ರಚಿಸಲು 27,000 ಕಿ.ಮೀ. ಮಾರ್ಗದಲ್ಲಿ ಆರ್ಥೀಕ ಕಾರಿಡಾರ್ ನಿರ್ಮಿಸಿ 44 ಹೆದ್ದಾರಿಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ.
ಈ ಕಾರಿಡಾರ್ನಲ್ಲಿ ರಿಂಗ್ ರೋಡ್ ಮತ್ತು ಲಾಜಿಸ್ಟಿಕ್ಸ್ ಹಬ್ ನಿರ್ಮಿಸುವ ಮೂಲಕ ದೇಶದ 30 ನಗರಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ವಾಜಪೇಯಿ ಸರ್ಕಾರದ 13,000 ಕಿ.ಮೀ. ಸುವರ್ಣ ಚತುಷ್ಪಥ ಮತ್ತು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಕಾರಿಡಾರ್ ನಂತರದ ಅತೀ ದೊಡ್ಡ ಹೆದ್ದಾರಿ ವಿಸ್ತರಣೆ ಯೋಜನೆ ಇದಾಗಿದೆ.
ಈ ವಿಸ್ತರಣೆ ಯೋಜನೆಯು ಉತ್ಪಾದನಾ ಸಮೂಹಗಳು ಮತ್ತು ಬಂದುರುಗಳು, ಪ್ರಮುಖ ಆರ್ಥಿಕ ಚಟುವಟಿಕೆ ಕೇಂದ್ರಗಳನ್ನು ಸಂಪರ್ಕಿಸಲಿದೆ.
ಈ ಯೋಜನೆ ಮುಂದಿನ ಆರು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದ್ದು, ಸರ್ಕಾರ ರಸ್ತೆ ಅಭಿವೃದ್ಧಿ ತೆರಿಗೆ, ಸಂಸ್ಥೆಗಳಿಂದ ಸಾಲ ಪಡೆಯುವುದು ಮತ್ತು ಖಾಸಗಿ ಹೂಡಿಕೆಯ ಮುಖಾಂತರ ಬಂಡವಾಳ ಸಂಗ್ರಹಿಸಲಿದೆ.
ಅಲ್ಲದೇ ಮತ್ತೊಂದು 15,000 ಕಿ.ಮೀ. ಆರ್ಥಿಕ ಕಾರಿಡಾರ್ ಉಪ ಮಾರ್ಗಗಳೂ ಅಭಿವೃದ್ಧಿಯಾಗಲಿದೆ. ಈ 40 ಉಪ ಮಾರ್ಗಗಳ ಕಾರಿಡಾರ್, 44 ಹೆದ್ದಾರಿಗಳ ಕಾರಿಡಾರ್ ಮತ್ತು ಸುವರ್ಣ ಚತುಷ್ಪಥ ಮಾರ್ಗಗಳನ್ನು ಸಂಪರ್ಕಿಸಲಿದೆ. ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳನ್ನು ರಾಷ್ಟ್ರೀಯ ಕಾರಿಡಾರ್, ಆರ್ಥಿಕ ಕಾರಿಡಾರ್, ಉಪ ಮಾರ್ಗಗಳಾಗಿ ಬದಲಿಸ ಲಿದ್ದು, ಇದನ್ನು ಉಪಗ್ರಹದ ಚಿತ್ರಣದ ಮೂಲಕ ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.