ಕೊಚ್ಚಿ: ಐತಿಹಾಸಿಕ ತ್ರಿಶೂರ್ ಪೂರಮ್ ಉತ್ಸವಕ್ಕೆ ಕೇರಳ ಸಜ್ಜಾಗಿದೆ, ಈ ಹಿನ್ನಲೆಯಲ್ಲಿ ಅಲ್ಲಿನ ಸಿಎಂ ಉಮ್ಮನ್ ಚಾಂಡಿ ಅವರಿಗೆ ಇಮೇಲ್ ಮೂಲಕ ಪತ್ರ ಬರೆದಿರುವ ಹಾಲಿವುಡ್ ನಟಿ ಪಮೇಲಾ ಆಂಡ್ರಸನ್ ಈ ಹಬ್ಬದಲ್ಲಿ ಆನೆಗಳನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರಾಣಿಗಳ ರಕ್ಷಣೆಗೆಂದಿರುವ ಪೇಟಾ(PETA)ದ ಸದಸ್ಯೆಯಾಗಿರುವ ಪಮೇಲಾ ‘ಜೀವಂತ ಆನೆಗಳನ್ನು ಉತ್ಸವಕ್ಕೆ ಬಳಸಿಕೊಳ್ಳಬೇಡಿ, ಬದಲಾಗಿ ಉತ್ಸವಕ್ಕೆ ಬಿದಿರಿನಿಂದ ಮಾಡಿದ ದೊಡ್ಡ ಗಾತ್ರದ ಕೃತಕ ಆನೆಗಳನ್ನು ಬಳಸಿ ಅದಕ್ಕೆ ಬೇಕಾಗುವ ವೆಚ್ಚವನ್ನು ನಾವು ಭರಿಸುತ್ತೇವೆ’ ಎಂದು ಕೇಳಿಕೊಂಡಿದ್ದಾರೆ.
ಅಲ್ಲದೇ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಲಯದಲ್ಲಿ ಆನೆಗಳನ್ನು ಬಂಧಿಸಿ ಇಡುವುದರ ವಿರುದ್ಧ ಜನಾಭಿಪ್ರಾಯ ಮೂಡುತ್ತಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೂರಮ್ ಉತ್ಸವಕ್ಕೆ ಇನ್ನು ಕೇವಲ ಎರಡು ದಿನಗಳಷ್ಟೇ ಉಳಿದಿವೆ. ಈ ಉತ್ಸವದಲ್ಲಿ ನೂರಾರು ಆನೆಗಳ ಪಥಸಂಚಲನ ಮಾಡಿಸಲಾಗುತ್ತದೆ.
ಭಾರತದ ಎನಿಮಲ್ ವೆಲ್ಫೇರ್ ಬೋರ್ಡ್ ಕೂಡ ಆನೆಯನ್ನು ಉತ್ಸವದಲ್ಲಿ ಬಳಸಿಕೊಳ್ಳದಂತೆ ಮನವಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.