ಸಿಲಾಕ್ಯಾಪ್ : ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ನಾಲ್ವರಿಗೆ ಇಂಡೋನೇಷ್ಯಾದಲ್ಲಿ ಗುರುವಾರ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ನಾಲ್ವರ ಪೈಕಿ ಮೂವರು ವಿದೇಶಿಗರಾಗಿದ್ದಾರೆ. ಇವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಆದರೆ ಮರಣದಂಡನೆಗೆ ಗುರಿಯಾಗಿದ್ದ ಓರ್ವ ಭಾರತೀಯ, ಓರ್ವ ಪಾಕಿಸ್ಥಾನಿ ಸೇರಿದಂತೆ ಒಟ್ಟು 10 ಮಂದಿಗೆ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿಲ್ಲ. ಇವರಿಗೆ ಶಿಕ್ಷೆ ನೀಡದಿರಲು ಕಾರಣವೇನು ಎಂಬ ಬಗ್ಗೆ ಅಲ್ಲಿನ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
‘ಜೀವ ತೆಗೆಯುವ ಸಲುವಾಗಿ ನಾವು ಈ ಶಿಕ್ಷೆಯನ್ನು ನೀಡಿಲ್ಲ. ಬದಲಾಗಿ ದುಷ್ಟ ಉದ್ದೇಶ, ದುಷ್ಟ ಕ್ರಮದಿಂದ ಕೂಡಿದ ಮಾದಕ ದ್ರವ್ಯ ಕಳ್ಳಸಾಗಾಣಿಕೆ ತಡೆಯುವ ಸಲುವಾಗಿ ಶಿಕ್ಷೆ ವಿಧಿಸಿದ್ದೇವೆ’ ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಗುರುದೀಪ್ ಸಿಂಗ್ ಅವರಿಗೆ ಶಿಕ್ಷೆ ಘೋಷಣೆಯಾಗಿತ್ತು. ಅವರ ಹತ್ಯೆಗೆ ಜುಲೈ 28 ರಂದು ದಿನಾಂಕವೂ ನಿಗದಿಯಾಗಿತ್ತು. ಇದನ್ನು ತಡೆಯಲು ಭಾರತ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಆಶ್ಚರ್ಯ ಎಂಬಂತೆ ಇಂಡೋನೇಷ್ಯಾ ಗುರುದೀಪ್ ಸಿಂಗ್ ಸೇರಿದಂತೆ ೧೦ ಮಂದಿಗೆ ಶಿಕ್ಷೆಯನ್ನು ನೀಡಿಲ್ಲ.
ಮಾದಕದ್ರವ್ಯ ಆರೋಪಿಗಳನ್ನು ಅಮಾನವೀಯ ರೀತಿಯಲ್ಲಿ ಮರಣದಂಡನೆಗೆ ಗುರಿಪಡಿಸುತ್ತಿರುವ ಇಂಡೋನೇಷ್ಯಾದ ವಿರುದ್ಧ ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ಸೇರಿದಂತೆ ಹಲವಾರು ವಿಶ್ವ ನಾಯಕರು ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.