ನವದೆಹಲಿ: ರಸ್ತೆ ಇಂಜಿನಿಯರಿಂಗ್ ಗುಣಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಣೆ ತರುವ ಮೂಲಕ ಪರಿಪೂರ್ಣತೆ ಹೊಂದುವುದು ಅಗತ್ಯ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಿದ್ದು, ಸುರಕ್ಷತೆ ಕಾಪಾಡಲು ಪ್ರಥಮ ಹಂತದಲ್ಲಿ ವಿಸ್ತೃತ ಯೊಜನಾ ವರದಿ (ಡಿಪಿಆರ್) ತಯಾರಿಸುವುದು ಅಗತ್ಯ ಎಂದು ಹೇಳಿದ್ದಾರೆ.
ಡಿಪಿಆರ್ ಇತ್ತೀಚೆಗಿನ ತಂತ್ರಜ್ಞಾನ, ಗುಡ್ಡ-ಕಾಡು ಪ್ರದೇಶದಲ್ಲಿ ಕುಸಿತ ತಡೆಗಟ್ಟುವುದು, ಗುಣಮಟ್ಟದ ಸಂಚಾರ ಯೋಜನೆ ಮತ್ತು ಸಾಂಕೇತಿಕ ಚಿಹ್ನೆಗಳು ಹೊಂದುವದು ಹಾಗೂ ಅಪಾಯಕಾರಿ ಪ್ರದೇಶವನ್ನು ಗುರುತಿಸುವಂತಿರಬೇಕು ಎಂದು ಗಡ್ಕರಿ ಹೇಳಿದ್ದಾರೆ.
ಡಿಪಿಆರ್ ವರದಿ ತಯಾರಿಸುವಲ್ಲಿ ಸಮಯಬದ್ಧರಾಗಬೇಕು ಹಾಗೂ ಪ್ರತೀ ಹಂತದಲ್ಲಿ ತ್ವರಿತ ಮತ್ತು ಪಾರದರ್ಶಕ ನಿರ್ಧಾರ ಕೈಗೊಳ್ಳಬೇಕು. ಅತೀ ಹೆಚು ಮಳೆಯಾಗುವ ಈಶಾನ್ಯ ರಾಜ್ಯಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಎನ್ಎಚ್ಐಡಿಸಿಎಲ್ ನಿಭಾಯಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು ಸೇತುವೆಗಳ ನಿರ್ಮಾಣಕ್ಕೆ ನಿಗಮಗಳು ಪೂರ್ವನಿಯೋಜಿತ ಘಟಕರೂಪಿಸಬೇಕು ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.