ನವದೆಹಲಿ : ಇಂಡೋನೇಷ್ಯಾದಲ್ಲಿ ಗಲ್ಲಿಗೇರಲ್ಪಡುತ್ತಿರುವ ಭಾರತೀಯರನ್ನು ರಕ್ಷಣೆ ಮಾಡಲು ಇಂದು ಭಾರತ ಕೊನೆಯ ಪ್ರಯತ್ನವನ್ನು ನಡೆಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ತಿಳಿಸಿದ್ದಾರೆ.
2004 ರಲ್ಲಿ ಇಂಡೋನೇಷ್ಯಾಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ 48 ವರ್ಷದ ಗುರುದೀಪ್ ಸಿಂಗ್ ಅವರಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿತ್ತು. ಜುಲೈ 28 ರಂದು ಗಲ್ಲಿಗೇರಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಗುರುದೀಪ್ ಅವರನ್ನು ರಕ್ಷಿಸಲು ಕೊನೆಯ ಹಂತದ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.
ಗುರುದೀಪ್ ಪಂಜಾಬ್ನ ಜಲಂಧರ್ ನಿವಾಸಿಯಾಗಿದ್ದು, ಇತರ 14 ಮಂದಿಯೊಂದಿಗೆ ಗಲ್ಲು ಶಿಕ್ಷೆಗೊಳಗಾಗಿದ್ದಾರೆ. ನುಸಕಾಂಬಂಗನ್ ದ್ವೀಪ ಜೈಲಿನಲ್ಲಿ ಇವರನ್ನು ಗಲ್ಲಿಗೇರಿಸಲು ಏರ್ಪಾಟುಗಳು ನಡೆದಿವೆ.
ಜಗತ್ತಿನಲ್ಲೇ ಇಂಡೋನೇಷ್ಯಾದಲ್ಲಿ ಮಾದಕ ದ್ರವ್ಯ ಮತ್ತು ಅದರ ಕಳ್ಳಸಾಗಣೆ ವಿರುದ್ದ ಕಠಿಣ ಕಾನೂನು ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.