ಚೆನ್ನೈ : ಸೂಪರ್ಸ್ಟಾರ್ ರಜನಿಕಾಂತ್ ಅವರ ಕಬಾಲಿ ಸಿನಿಮಾ ಜುಲೈ 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನ ಎಲ್ಲಾ ದಾಖಲೆಗಳನ್ನು ಮುರಿದು ಮುಂದುವರೆಯುತ್ತಿದೆ.
ಈ ಹಿನ್ನಲೆಯಲ್ಲಿ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಪತ್ರ ಬರೆದಿದ್ದು ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಸುದ್ದಿ ಮಾಡುತ್ತಿದೆ.
65 ವರ್ಷದ ರಜನಿ ಭಾನುವಾರ ಯುಎಸ್ಎನಿಂದ ಚೆನ್ನೈಗೆ ಆಗಮಿಸಿದ್ದಾರೆ. ತಮ್ಮ ಮಗಳು ಐಶ್ವರ್ಯಾರೊಂದಿಗೆ ಕಳೆದ 2 ತಿಂಗಳು ಅಮೇರಿಕಾದಲ್ಲಿ ತಂಗಿದ್ದ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಭಾರತಕ್ಕೆ ಆಗಮಿಸಿ ತಮ್ಮ ಅಭಿಮಾನಿಗಳಿಗೆ ತಮಿಳಿನಲ್ಲಿ ಪತ್ರ ಬರೆದಿರುವ ಅವರು “ಕಬಾಲಿ ಯಶಸ್ಸನ್ನು ತಿಳಿದ ಬಳಿಕ ಇದೀಗ ನಾನು ಭಾರತಕ್ಕೆ ಆಗಮಿಸಿದ್ದೇನೆ. ಯಶಸ್ಸನ್ನು ಕಣ್ಣಾರೆ ಕಾಣುತ್ತಿದ್ದೇನೆ. ಇದರಿಂದ ನನಗೆ ಅತೀವ ರೋಮಾಂಚನವಾಗಿದೆ. ಈ ಯಶಸ್ಸಿಗಾಗಿ ನಾನು ನನ್ನ ಸಿನಿಮಾ ತಂಡ, ನಿರ್ದೇಶಕ ಹಾಗೂ ನಿರ್ಮಾಪಕರು, ಸಹನಟರು, ಅಭಿಮಾನಿಗಳಿಗೆ, ಯುವಕರಿಗೆ, ಮಹಿಳೆಯರಿಗೆ, ಮಾಧ್ಯಮ, ಸ್ನೇಹಿತರಿಗೆ, ಥಿಯೇಟರ್ ಮಾಲಿಕರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದಿದ್ದಾರೆ.
ತಮ್ಮದೇ ಶೈಲಿಯಲ್ಲಿ ಪತ್ರಕ್ಕೆ ಸಹಿ ಮಾಡಿರುವ ಇವರು ‘magizhchi’ ಎಂದು ತಮಿಳಿನಲ್ಲಿ ಬರೆದಿದ್ದಾರೆ. ಸಂತೋಷ ಮತ್ತು ಧನ್ಯವಾದ ಎಂಬುದು ಇದರ ಅರ್ಥ.
ಕಬಾಲಿಯಲ್ಲಿ ರಜನಿಕಾಂತ್ ಮಲೇಷ್ಯಾ ಡಾನ್ನ ಪಾತ್ರ ನಿಭಾಯಿಸಿದ್ದು ಕಳೆದ ಶುಕ್ರವಾರ ಬಿಡುಗಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.