ನವದೆಹಲಿ : ಮಾನವ ಹಕ್ಕು ಹೋರಾಟಗಾರ್ತಿ, ಮಣಿಪುರದ ಐರನ್ಲೇಡಿ ಎಂದೇ ಪ್ರಖ್ಯಾತರಾಗಿರುವ ಇರೋಮ್ ಚಾನು ಶರ್ಮಿಳಾ ತಮ್ಮ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ ತಿಂಗಳಲ್ಲಿ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಮುಂಬರುವ ಈಶಾನ್ಯ ಭಾಗದ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.
“ಸರ್ಕಾರ ಯಾವುದೇ ಸಕಾರಾತ್ಮಕ ಸ್ಪಂದನೆ ತೋರಿಸದೆ ಇರುವ ಕಾರಣ ನಾನು ನನ್ನ ಉಪವಾಸವನ್ನು ನಿಲ್ಲಿಸುತ್ತಿದ್ದೇನೆ. ಅಲ್ಲದೆ ಸಮಸ್ಯೆಯನ್ನು ಬಗೆಹರಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಇರೋಮ್ ಶರ್ಮಿಳಾ ಹೇಳಿಕೊಂಡಿದ್ದಾರೆ.
42 ವರ್ಷದ ಇರೋಮ್ ಮಣಿಪುರದಲ್ಲಿ ಹೇರಲಾಗಿರುವ ಶಸ್ತ್ರಾಸ್ತ್ರಪಡೆ ಕಾಯ್ದೆಯನ್ನು ಹಿಂತೆಗೆಯುವಂತೆ 2000 ದ ನವೆಂಬರ್ನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಹಲವಾರು ಬಾರಿ ಅವರನ್ನು ಆತ್ಮಹತ್ಯಾ ಪ್ರಯತ್ನದಡಿ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಆದರೂ ತಮ್ಮ ಉಪವಾಸ ನಿಲ್ಲಿಸದ ಈ ದಿಟ್ಟ ಮಹಿಳೆ ಇದೀಗ ತನ್ನ ನಿರ್ಧಾರವನ್ನು ಬದಲಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.