ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋ ಕಾರ್ಯಕ್ರಮದ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ತಮ್ಮ ಟ್ರೆಂಡ್ನ್ನು ಮುಂದುವರೆಸಿದ್ದಾರೆ.
ಮುಂದಿನ ಭಾನುವಾರ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನ 22 ನೇ ಆವೃತ್ತಿ ಪ್ರಸಾರವಾಗಲಿದ್ದು, ಇದಕ್ಕೆ ಐಡಿಯಾಗಳನ್ನು ನೀಡುವಂತೆ ದೇಶದ ಜನರಿಗೆ ಅವರು ಕರೆ ನೀಡಿದ್ದಾರೆ.
ಈಗಾಗಲೇ ಆ್ಯಪ್ ಮೂಲಕ ಬಂದಿರುವ ಐಡಿಯಾಗಳನ್ನು ಪರಿಶೀಲಿಸಿದ್ದು, ಅವುಗಳು ನಿಜಕ್ಕೂ ನಾವೀನ್ಯ ಮತ್ತು ಶ್ರೀಮಂತವಾಗಿವೆ. ಅದನ್ನು ಕಳುಹಿಸಿದವರಿಗೆ ನನ್ನ ವಂದನೆಗಳು. ಇದೇ ರೀತಿ ಆ್ಯಪ್ ಮೂಲಕ ಐಡಿಯಾಗಳನ್ನು ನೀಡುವುದನ್ನು ಮುಂದುವರೆಸಿರಿ ಎಂದು ಮೋದಿ ಟ್ವಿಟರ್ ಮೂಲಕ ಹೇಳಿದ್ದಾರೆ.
ಜೂನ್ 26 ರಂದು ಅವರ ಕಳೆದ ಮನ್ ಕಿ ಬಾತ್ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ತುರ್ತು ಪರಿಸ್ಥಿತಿ ಕುರಿತು ಅವರು ಮಾತನಾಡಿದ್ದರು. ತುರ್ತುಪರಿಸ್ಥಿತಿ ದಿನಗಳು ಕರಾಳ ದಿನಗಳು ಎಂದು ಅವರು ಬಣ್ಣಿಸಿದ್ದರು.
ಈ ಬಾರಿಯ ರೇಡಿಯೋ ಕಾರ್ಯಕ್ರಮದಲ್ಲಿ ಯಾವ ವಿಷಯಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.