ಶ್ರೀನಗರ: ಕುಲ್ಗಾಂವ್ನಲ್ಲಿನ ದಂಹಾಲ್ ಪೊಲೀಸ್ ಸ್ಟೇಷನ್ನಿಂದ ಸುಮಾರು 70 ಕ್ಕೂ ಹೆಚ್ಚು ಸ್ವಯಂಚಾಲಿತ ಮತ್ತು ಅರೆಸ್ವಯಂಚಾಲಿತ ಗನ್ಗಳನ್ನು ಕಾಶ್ಮೀರಿ ಯುವಕನೊಬ್ಬ ಲೂಟಿ ಮಾಡಿ ಪರಾರಿಯಾಗಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ದಮನಸುವ ಪ್ರಯತ್ನದಲ್ಲಿರುವ ಭದ್ರತಾಪಡೆಗಳು ಶುಕ್ರವಾರ ನಡೆಯಲಿರುವ ಪ್ರಾರ್ಥನೆ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈಗಾಗಲೇ ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ ನಡೆಯುವ ಪ್ರಾರ್ಥನೆಗಳಲ್ಲಿ ಭದ್ರತಾಪಡೆಗಳ ವಿರುದ್ಧ ಪ್ರತಿಭಟನೆ, ಪಾಕಿಸ್ಥಾನ, ಇಸಿಸ್ ಧ್ವಜಗಳನ್ನು ಹಾರಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ ಈ ಬಾರಿ ಮೂಲಗಳ ಪ್ರಕಾರ ಪ್ರಾರ್ಥನೆ ಸಮಯದಲ್ಲಿ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ತಕ್ಕಂತೆ ಒಬ್ಬ ಕಾಶ್ಮೀರಿ ಯುವಕ 70 ಗನ್ಗಳನ್ನು ಲೂಟಿ ಮಾಡಿರುವುದು ಯೋಜನೆಗೆ ಪುಷ್ಟಿ ಕೊಟ್ಟಂತಿದೆ.
ತ್ರಾಲ್, ಕರಾಲ್ಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭದ್ರತಾಪಡೆಗಳಿಂದ ರಕ್ಷಣಾ ಆಯುಧಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಕೆಲವು ಗುಂಪುಗಳು ಮಾಡಿವೆ ಎಂದು ಮೂಲಗಳು ತಿಳಿಸಿವೆ.
ಉಗ್ರರ ಪೋಸ್ಟರ್ ಬಾಯ್ ಬುರ್ಹಾನ್ ವಾನಿ ಕಾಶ್ಮೀರಿ ಯುವಕರಿಗೆ ಈ ಹಿಂದೆ ಭದ್ರತಾಪಡೆಗಳ ಮೇಲೆ ದಾಳಿ ಮಾಡಿ ಅವರ ಶಸ್ತ್ರಾಸ್ತ್ರಗಳನ್ನು ದೋಚಲು ಕರೆ ನೀಡಿದ್ದ ಎನ್ನಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು-ಕಾಶ್ಮೀರದೆಲ್ಲೆಡೆ ಹಿಂಸಾಚಾರ, ಪ್ರತಿಭಟನೆಗಳು ಹೆಚ್ಚಿದ್ದು, ಈಗಾಗಲೇ 34 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಈ ಎಲ್ಲಾ ಕೃತ್ಯಗಳ ಹಿಂದೆ ಉಗ್ರರು ಇದ್ದಾರೆ ಎಂಬ ಅಂಶ ಬಯಲಾಗಿದೆ. ಉಗ್ರರು ಪ್ರತಿಭಟನಾಕಾರರನ್ನು ತಮ್ಮ ರಕ್ಷಣಾ ಅಸ್ತ್ರವನ್ನಾಗಿ ಬಳಸಿಕೊಂಡು ಈ ರೀತಿಯ ಹಿಂಸಾತ್ಮಕ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಲ್ಲು ತೂರಾಟ ನಡೆಸುವ ಪ್ರತಿಭಟನಾಕಾರರ ಹಿಂದೆ ನಿಂತು ಉಗ್ರರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ಮಾಡುತ್ತಿದ್ದಾರೆ. ದಾಳಿಗೆ ಭದ್ರತಾ ಪಡೆಗಳು ಗುರಿಯಾದರೂ ಸ್ವಯಂ ರಕ್ಷಣೆಗಾಗಿ ಪ್ರತಿಭಟನಾಕಾರರ ಮೇಲೆ ಪ್ರತಿದಾಳಿ ನಡೆಸುವಂತಿಲ್ಲ. ಇದು ಭದ್ರತಾ ಪಡೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೊಂದೆಡೆಗ ಈ ಹಿಂದೆ ಕೆಲವು ಶರಣಾದ ಉಗ್ರರು ಕೂಡಾ ಮತ್ತೆ ಭಯೋತ್ಪಾದಕರೊಂದಿಗೆ ಕೈಜೋಡಿಸಿ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ ಎನ್ನಲಾಗಿದೆ.
5 ನೇ ದಿನವಾದ ಇಂದು ಕೂಡಾ ಕರ್ಫ್ಯೂ ಮುಂದುವರೆಸಲಾಗಿದೆ.
ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.