ಹೈದರಾಬಾದ್: ತೆಲಂಗಾಣ ಸ್ಥಾಪನಾ ದಿನದ ಅಂಗವಾಗಿ ತೆಲಂಗಾಣದಲ್ಲಿ ಸಂಭ್ರಮಾಚರಣ ನಡೆಯುತ್ತಿದ್ದು, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಇದರ ಸಂಭ್ರಮ ಆಚರಣೆಗೆ 15 ಕೋಟಿ ರೂ. ಮಂಜೂರು ಮಾಡಿದೆ.
ಈ ಸಂದರ್ಭ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ನಾಯಕರು ತೆಲಂಗಾಣ ಚಳವಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಹೈದರಾಬಾದ್ನ ಹುಸೈನ್ ಸಾಗರ್ ಸರೋವರದ ಸಮೀಪದ ಸಂಜೀವಯ್ಯ ಪಾರ್ಕ್ನಲ್ಲಿ ದೇಶದ ಅತೀ ದೊಡ್ಡ ಧ್ವಜವನ್ನು ಹಾರಿಸಲಾಯಿತು. ಭದ್ರತಾ ಪಡೆಗಳು ಪೆರೇಡ್ ನಡೆಸಿದ್ದು, ಹಲವಾರುಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಂಧ್ರಪ್ರದೇಶ ಪುನರ್ಸಂಘಟನಾ ಕಾಯ್ದೆ ಅಡಿಯಲ್ಲಿ ಜೂ.2, 2014ರಂದು ತೆಲಂಗಾಣ ರಾಜ್ಯ ಅಸ್ತಿತ್ಬಕ್ಕೆ ಬಂದಿದ್ದು, ಇದರ ಎರಡನೇ ವರ್ಷದ ಆಚರಿಸಲು ತೆಲಂಗಾಣ ಸರ್ಕಾರ ಪ್ರತಿ ಜಿಲ್ಲೆಗೆ 30 ಲಕ್ಷ ರೂ. ನಿಯೋಜಿಸಿದೆ.
ತೆಲಂಗಾಣ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಇದೇ ವೇಳೆ ರಾಜ್ಯದಲ್ಲಿ 13 ಹೊಸ ಜಿಲೆಗಳು ಮತ್ತು 40 ಮಂಡಲಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.
ಉಪಮುಖ್ಯಮಂತ್ರಿ ಮೊಹಹಮ್ಮದ್ ಮಹಮೂದ್ ಅಲಿ ಅವರು ನವದೆಹಲಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಶುಭ ಕೋರಲಿದ್ದಾರೆ ಎಂದು ಸರ್ಕಾರದ ಪ್ರತಿನಿಧಿಗಳು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಾನಪದ, ಕಥಕ್, ಕುಚಿಪುಡಿ, ಯೋಗ ಪಿರಮಿಡ್ಗಳು, ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳು ನಡೆಯಲಿವೆ ಎ<ದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.