ನವದೆಹಲಿ: ಸಂಸತ್ತಿನಲ್ಲಿ ಸಚಿವೆ ಸ್ಮೃತಿ ಇರಾನಿ ಪ್ರತಿ ಪಕ್ಷಗಳಿಗೆ ನೀಡಿದ ತಿರುಗೇಟಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ತಮ್ಮ ಟ್ವಿಟರ್ನಲ್ಲಿ ಸ್ಮೃತಿ ಇರಾನಿಯವರು ಮಾಡಿದ ಭಾಷಣದ ವೀಡಿಯೋವನ್ನು ಸತ್ಯಮೇವ ಜಯತೆ ಎನ್ನುವ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿದ್ದಾರೆ.
2016 ರ ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನಲ್ಲಿ ರೋಹಿತ್ ವೇಮುಲ ಪ್ರಕರಣ ಕುರಿತು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಪ್ರತಿ ಪಕ್ಷಗಳಿಗೆ ನೀಡಿದ ಪ್ರತ್ಯುತ್ತರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಚಿವೆ ಸ್ಮೃತಿ ಇರಾನಿಯವರನ್ನು ಶ್ಲಾಘಿಸಿದ್ದಾರೆ.
ಜೆಎನ್ಯು ಪ್ರಕರಣ ಹಾಗೂ ಹೈದರಾಬಾದ್ನ ರೋಹಿತ್ ವೇಮುಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಕಟು ಟೀಕೆಗೆ ಖಡಕ್ ಆಗಿ ದಾಖಲೆಗಳ ಸಹಿತ ಉತ್ತರಿಸಿರುವ ಸ್ಮೃತಿ ಇರಾನಿಯವರು, ದೇಶದ ವಿದ್ಯಾರ್ಥಿಗಳನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳಬೇಡಿ. ಮಕ್ಕಳು ದೇಶದ ಭವಿಷ್ಯ. ಅವರನ್ನು ರಾಜಕೀಯವಾಗಿ ಬಳಸಿಕೊಂಡು ಅವರ ಭವಿಷ್ಯವನ್ನು ಹಾಳು ಮಾಡಬೇಡಿ. ನಾನು ನಿಮ್ಮ ದೇಶಪ್ರೇಮಕ್ಕೆ ಪ್ರಶಂಸನೆ ನೀಡೋದಿಲ್ಲ. ಆದರೆ ನೀವು ನನ್ನ ದೇಶಪ್ರೇಮವನ್ನು ಕೀಳಾಗಿ ಕಾಣಬೇಡಿ ಎಂದು ಖಡಕ್ ಆಗಿ ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿ. ಎಸ್. ಪಿ. ನಾಯಕಿ ಮಾಯಾವತಿ ಅವರು ವೇಮುಲ ಆತ್ಮಹತ್ಯೆ ಪ್ರಕರಣದ ವಿರುದ್ಧ ಹರಿಹಾಯ್ದಿದ್ದಕ್ಕಾಗಿ ಸ್ಮೃತಿ ಇರಾನಿಯವರು ಅವರಿಗೆ ನೀವು ನಾವು ಹೇಳುವುದನ್ನು ಸರಿಯಾಗಿ ತಾಳ್ಮೆಯಿಂದ ಕೇಳಿ. ಅಷ್ಟಕ್ಕೂ ಅದು ನಿಮಗೆ ಅದು ತೃಪ್ತಿ ತರದಿದ್ದರೆ, ನನ್ನ ರುಂಡವನ್ನೇ ಕತ್ತರಿಸಿ ನಿಮ್ಮ ಪಾದಗಳಲ್ಲಿ ಇಡಲು ಸಿದ್ಧಳಿದ್ದೇನೆ,” ಎಂದು ಗದ್ಗಿತರಾಗಿ ಹೇಳಿದ್ದಾರೆ.
ನನ್ನ ಹೆಸರು ಸ್ಮೃತಿ ಇರಾನಿ, ತಾಕತ್ತಿದ್ದರೆ ನನ್ನ ಜಾತಿ ಹೇಳಿ ಎಂದು ಸವಾಲು ಹಾಕಿದ್ದಾರೆ. ರೋಹಿತ್ ವೇಮುಲ ಪ್ರಕರಣದಲ್ಲಿ ಇಲಾಖೆಯ ತಪ್ಪೇನೂ ಇಲ್ಲ. ಡೆತ್ ನೋಟಿನಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಸಚಿವೆಯಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಈ ವಿಷಯದಲ್ಲಿ ನಾನು ಕ್ಷಮೆ ಕೇಳುವುದಿಲ್ಲ. ನಾನು ಕೇಸರೀಕರಣ ಮಾಡುತ್ತಿದ್ದೇನೆ ಎಂದು ಬೊಟ್ಟು ಮಾಡಿದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.