ನವದೆಹಲಿ: ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತಿದ್ದೇವೆ ಎಂಬ ದೆಹಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಾದವನ್ನು ಬಹುತೇಕ ದೆಹಲಿಗರು ಒಪ್ಪಿಕೊಂಡಿಲ್ಲ. ಶೇ.77ರಷ್ಟು ದೆಹಲಿಗರು ಎಎಪಿ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಸೇರಿದಂತೆ ಎಎಪಿಯಿಂದ ಹೊರಬಂದ ಸದಸ್ಯರ ನೇತೃತ್ವದ ಸ್ವರಾಜ್ ಅಭಿಯಾನ್ ಫೆ.10ರಿಂದ 14ರವರೆಗೆ ಸಮೀಕ್ಷೆ ನಡೆಸಿದ್ದು, 70 ವಿಧಾನಸಭಾ ಕ್ಷೇತ್ರಗಳ 10,000 ಜನರನ್ನು ಸಂಪರ್ಕಿಸಿ ಅವರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಶೇ.62ರಷ್ಟು ದೆಹಲಿಗರು ಎಎಪಿ ನಮಗೆ ಭರವಸೆ ನೀಡದಂತೆ ವಿದ್ಯುತ್ ಬಿಲ್ ಕಡಿಮೆಯಾಗಿಲ್ಲ ಮತ್ತು ತಿಂಗಳಿಗೆ 20,000 ಲೀಟರ್ ನೀರು ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಎಎಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಟವೇ ದೊಡ್ಡ ನಾಟಕ ಎಂದು ಹಲವಾರು ಮಂದಿ ಅಭಿಪ್ರಾಯಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ಭರವಸೆ ನಿಡದ ರೀತಿ ಜನಲೋಕಪಾಲವನ್ನು ಜಾರಿಗೆ ತರಲಾಗಿಲ್ಲ, ಶೇ.82ರಷ್ಟು ಮಂದಿ ವಯೋವೃದ್ಧ ಪಿಂಚಣಿ ಸಿಗುತ್ತಿಲ್ಲ ಎಂದರೆ, ಶೇ.80ರಷ್ಟು ಮಂದಿ ದೆಹಲಿ ಮಹಿಳೆಯರಿಗೆ ಸೇಫ್ ಅಲ್ಲ ಎಂದಿದ್ದಾರೆ. ಶೇ.85ರಷ್ಟು ಮಂದಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.