ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಾಗೂ ಸಿಪಿಎಂ ನಡುವಿನ ಘರ್ಷಣೆ ಮುಂದುವರಿದಿದ್ದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ಸಂಭವಿಸಿದೆ.
ಕೊಲೆ ನಡೆಸಿದ ಗುಂಪಿನ ಆಪಾದಿತ ಸದಸ್ಯರನ್ನು ಸಿಪಿಐ(ಎಂ) ಕಾರ್ಯಕರ್ತರು ಎಂದು ಅಂದಾಜಿಸಲಾಗಿದ್ದು, ಈ ಗುಂಪು ಆರ್ಎಸ್ಎಸ್ ಕಾರ್ಯಕರ್ತ 27 ವರ್ಷದ ಸುಜಿತ್ ಎಂಬಾತನ ಮನೆಗೆ ನುಗ್ಗಿ ಕೊಲೆ ನಡೆಸಿದೆ. ಘಟನೆಯಲ್ಲಿ ಸುಜಿತ್ನ ಪೋಷಕರಿಗೂ ಕೂಡ ಗಾಯಗಳಾಗಿವೆ ಎನ್ನಲಾಗಿದೆ.
ರಾಜಕೀಯ ವೈಷಮ್ಯದ ಕಾರಣಕ್ಕಾಗಿ ಕೊಲೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಘಟನೆಯ ಕಾರಣ ತಿಳಿದು ಬಂದಿಲ್ಲ.
ಆರ್ಎಸ್ಎಸ್ ಕಣ್ಣುರು ಜಿಲ್ಲೆಯಾದ್ಯಂತ ಒಂದು ದಿನದ ಬಂದ್ಗೆ ಕರೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ)ನ 8 ಮಂದಿ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.