
ಢಾಕಾ: ಬಾಂಗ್ಲಾದೇಶದ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚಾಗುತ್ತಿದ್ದು, ಕೇವಲ ಡಿಸೆಂಬರ್ ಒಂದೇ ತಿಂಗಳಿನಲ್ಲಿ ಹಿಂದೂಗಳ ಮೇಲೆ ಕನಿಷ್ಠ 51 ಸಾಮೂಹಿಕ ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ವರದಿ ಬಿಡುಗಡೆ ಮಾಡಿದೆ.
ಬಾಂಗ್ಲಾದೇಶದಲ್ಲಿ ಸರ್ಕಾರ ಪತನವಾದಗಿನಿಂದಲೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆ ಹಾಗೂ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಹತ್ಯೆ ಬಳಿಕ ಪರಿಸ್ಥಿತಿ ಉಲ್ಬಣಗೊಂಡಿದೆ. ಇದರಿಂದ ದಾಳಿಗಳು ಹೆಚ್ಚಾಗುತ್ತಿದ್ದು, ಈ ದಾಳಿಗಳಲ್ಲಿ ಕೊಲೆ, ಸುಲಿಗೆ, ಸುಟ್ಟುಹಾಕುವಿಕೆ, ಸುಲಿಗೆ ಮತ್ತು ಕಳ್ಳತನ, ಸುಳ್ಳು ಧರ್ಮನಿಂದನೆ ಆರೋಪಗಳ ಅಡಿಯಲ್ಲಿ ಬಂಧನ ಮತ್ತು ಚಿತ್ರಹಿಂಸೆ, ಅತ್ಯಾಚಾರ ಯತ್ನ ಮತ್ತು ದೈಹಿಕ ಹಲ್ಲೆಗಳು ಸೇರಿವೆ ಎಂದು ತಿಳಿಸಿದೆ.
ಬಾಂಗ್ಲಾದೇಶದಲ್ಲಿ ಕೇವಲ ಡಿಸೆಂಬರ್ ತಿಂಗಳಿನಲ್ಲೇ ನಡೆದ ದಾಳಿಗಳ ವಿವರ ನೀಡಿದ್ದು, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮನೆಗಳು, ದೇವಾಲಯಗಳು ಮತ್ತು ವ್ಯಾಪಾರ ಮಳಿಗೆಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ 10 ಕೊಲೆಗಳು, 23 ಸುಲಿಗೆ ಮತ್ತು ಸುಟ್ಟುಹಾಕುವಿಕೆ ಪ್ರಕರಣಗಳು, 10 ಸುಲಿಗೆ ಮತ್ತು ಕಳ್ಳತನದ ಘಟನೆಗಳು, ಸುಳ್ಳು ಧರ್ಮನಿಂದನೆ ಆರೋಪಗಳ ಅಡಿಯಲ್ಲಿ 4 ಬಂಧನ ಮತ್ತು ಚಿತ್ರಹಿಂಸೆ ಪ್ರಕರಣಗಳು, 1 ಅತ್ಯಾಚಾರ ಯತ್ನ, ಮತ್ತು 3 ದೈಹಿಕ ಹಲ್ಲೆ ಪ್ರಕರಣಗಳನ್ನು ನಡೆಸಲಾಗಿದೆ ಎಂದು ವರದಿ ಮಾಡಿದೆ. ಈ ವರದಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದ್ದು, ಇದರಿಂದ ಮುಕ್ತಿ ನೀಡುವಂತೆ ಎಂಟು ಸದಸ್ಯರ ಅಲ್ಪಸಂಖ್ಯಾತ ನಾಯಕರ ನಿಯೋಗವು ಢಾಕದಲ್ಲಿ ಬಿಎನ್ಪಿ ಕಾರ್ಯಕಾರಿ ಅಧ್ಯಕ್ಷ ತಾರಿಕ್ ರಹಮಾನ್ ಭೇಟಿ ನಡೆಸಿ ಭದ್ರತೆ, ನ್ಯಾಯ ಮತ್ತು ಸಮಾನ ಹಕ್ಕುಗಳಿಗೆ ಸಂಬಂಧಿಸಿದ ಎಂಟು ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿ, ರಾಜಕೀಯ ಭರವಸೆಗಳನ್ನು ಕೋರಿದ್ದಾರೆ.
ಈ ಘಟನೆಗಳು ಬಾಂಗ್ಲಾದೇಶದಲ್ಲಿ ಹೆಚ್ಚಾಗುತ್ತಿರುವ ಕಟ್ಟಾ ಇಸ್ಲಾಮಿಕ್ ಮನೋಭಾವನೆಗಳನ್ನು ಎತ್ತಿ ತೋರಿಸುತ್ತಿದ್ದು, ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಯೂನಸ್ ಸರ್ಕಾರ ವಿಫಲವಾಗಿದ್ದು, ಸ್ವತಃ ಅವರೇ ಅಲ್ಲಿನ ಜನತೆಯಲ್ಲಿ ಭಾರತ ವಿರೋಧಿ ಹಾಗೂ ಅಲ್ಪಸಂಖ್ಯಾತರ ವಿರೋಧಿ ಭಾವನೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸುತ್ತಿದೆ ಎಂದು ವರದಿಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



