
ಬಿಜಾಪುರ: ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಮೊಬೈಲ್ ಫೋನ್ಗಳ ಪ್ರಾಬಲ್ಯ ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೊಂಚ ವಿಭಿನ್ನ ಎಂಬಂತೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯು ತನ್ನ ನಾಗರಿಕ ಕ್ರಿಯಾ ಕಾರ್ಯಕ್ರಮದ ಅಡಿಯಲ್ಲಿ ಬಸ್ತಾರ್ ವಿಭಾಗದ ವಿವಿಧ ಗ್ರಾಮಗಳಲ್ಲಿ ರೇಡಿಯೋಗಳನ್ನು ವಿತರಿಸಿದೆ.
ಛತ್ತೀಸ್ಗಢದಲ್ಲಿ ನಕ್ಸಲಿಸಂ ವಿರುದ್ಧದ ಯುದ್ಧದಲ್ಲಿ ರೇಡಿಯೋ ಪ್ರಬಲ ಅಸ್ತ್ರವಾಗಿ ಹೊರಹೊಮ್ಮಿದೆ. ಈ ಅಭಿಯಾನದ ಭಾಗವಾಗಿ, ಸಿಆರ್ಪಿಎಫ್ನ 228 ನೇ ಬೆಟಾಲಿಯನ್ ಜಿಡ್ಪಲ್ಲಿ ಗ್ರಾಮ ಮತ್ತು ಹತ್ತಿರದ ಪಟ್ಟಣಗಳಲ್ಲಿ ರೇಡಿಯೋಗಳನ್ನು ವಿತರಿಸಿದೆ. ರೇಡಿಯೋ ವಿತರಣೆಯೊಂದಿಗೆ, ಗ್ರಾಮಸ್ಥರು ಉದ್ಯೋಗ, ಪರೀಕ್ಷೆಗಳು ಮತ್ತು ಸೇನೆ ಅಥವಾ ಪೊಲೀಸರಿಗೆ ನೇಮಕಾತಿ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಜನರಿಗೆ ಮನರಂಜನೆ, ಮಾಹಿತಿ ಮತ್ತು ಶಿಕ್ಷಣ ನೀಡುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರಕ್ಷುಬ್ಧ ಹಳ್ಳಿಗಳ ಜನರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ರೇಡಿಯೋ ಪ್ರಮುಖ ಪಾತ್ರ ವಹಿಸುತ್ತಿದೆ.
ರೇಡಿಯೋ ಕೇವಲ ಮನರಂಜನೆಯ ಮಾಧ್ಯಮವಲ್ಲ, ಬದಲಾಗಿ ನಂಬಿಕೆ ಮತ್ತು ಸಂವಹನದ ಕೊಂಡಿಯಾಗಿದೆ ಎಂದು ಜಿದ್ಪಲ್ಲಿ ಫಾರ್ವರ್ಡ್ ಆಪರೇಟಿಂಗ್ ಬೇಸ್ (FOB) ನ ಸಹಾಯಕ ಕಮಾಂಡೆಂಟ್ ರಾಘವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



