
ಬೆಳಗಾವಿ: ಒಳಮೀಸಲಾತಿಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿ ಮಾಡದೇ ಇದ್ದಲ್ಲಿ ಈ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ರಾಜ್ಯದ ಶೋಷಿತ ಮಾದಿಗರು, ಉಪ ಜಾತಿಗಳು ಮಾಡಲಿವೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬಡ್ತಿ ಮೀಸಲಾತಿ ಅನುಷ್ಠಾನ ಸಂಬಂಧ ಈ ಸದನದಲ್ಲಿ ತಿದ್ದುಪಡಿ ಮಾಡಬೇಕೆಂದು ಅವರು ಆಗ್ರಹಿಸಿದರು. ಸರಕಾರ ಚುನಾಯಿಸುವ ವಿಚಾರದಲ್ಲಿ ಹಿಂದೆ ಮಾದಿಗರು ತಮ್ಮ ಶಕ್ತಿಯನ್ನು ತೋರಿಸಿಕೊಟ್ಟಿದ್ದರು ಎಂದು ಗಮನ ಸೆಳೆದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಹರಿಯಾಣ, ಪಂಜಾಬ್, ಆಂಧ್ರ ಪ್ರದೇಶದಲ್ಲಿ ಮುಂಬಡ್ತಿ ಮೀಸಲಾತಿ ಇದೆ. ತಮಿಳುನಾಡಿನಲ್ಲೂ ಇದೆ; ಕರ್ನಾಟಕದಲ್ಲಿ ಇದು ಆಗಬೇಕು ಎಂದು ತಿಳಿಸಿದರು. ಕಳೆದ 20 ವರ್ಷಗಳಿಂದ ನಾನು ಹೋರಾಟದ ಭಾಗವಾಗಿದ್ದೇನೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
2023ರಲ್ಲಿ ಸಿದ್ದರಾಮಯ್ಯನವರು ಮಾದಿಗ ಉಪ ಜಾತಿಗಳಿಗೆ ಒಳ ಮೀಸಲಾತಿ ಕೊಡುವುದಾಗಿ ಮತ್ತೊಮ್ಮೆ ಪ್ರಣಾಳಿಕೆಯಲ್ಲಿ ತಿಳಿಸಿ ಅಧಿಕಾರಕ್ಕೆ ಬಂದರು. ಬಳಿಕ ಜನತೆಯ ದಿಕ್ಕು ತಪ್ಪಿಸಿದ್ದರು ಎಂದು ಆರೋಪಿಸಿದರು.
ಒಳ ಮೀಸಲಾತಿ ಜಾರಿಯ ನಂತರ ಮೀಸಲಾತಿ ಮಿತಿಯು ಶೇ 50 ಅನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟಿನ ನಿರ್ದೇಶನ ಇದ್ದರೂ, ಯಾವ ರಾಜ್ಯದಲ್ಲಿ ಶೇ 50 ಮಿತಿಯಿಂದ ಹೆಚ್ಚು ನೀಡುವ ಅವಶ್ಯಕತೆ ಇದ್ದರೆ, ಮಿತಿಯನ್ನು ಮೀರಬಹುದೆಂದು ತೀರ್ಪಿತ್ತಿದ್ದಾರೆ. ಛತ್ತೀಸಗಡದಲ್ಲಿ ಶೇ 58 ಮಾಡಿದ್ದರು. ಅಲ್ಲಿ ಹೈಕೋರ್ಟಿನ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ ಎಂದು ಗಮನ ಸೆಳೆದರು.
ಚಳಿಗಾಲದ ಅಧಿವೇಶನ ಇಲ್ಲಿ ನಡೆಯುತ್ತಿದೆ. ಒಳಮೀಸಲಾತಿಯ ಪ್ರಮುಖ ಚರ್ಚೆ ಆಗಬೇಕಿದೆ. ರಾಜ್ಯದಲ್ಲಿ 35 ವರ್ಷಗಳಿಂದ ಒಳಮೀಸಲಾತಿಯ ಹೋರಾಟ ನಡೆದಿದೆ. ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ, ನಾಗಮೋಹನದಾಸ್ ವರದಿ ಸೇರಿ ಅನೇಕ ಆಯೋಗದ ವರದಿಗಳು ಬಂದ ನಂತರವೂ ನ್ಯಾಯ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



