
ನವದೆಹಲಿ: ಮೇ 2023 ರ ನಂತರ ಮೊದಲ ಬಾರಿಗೆ ಮೈಟೈ ಮತ್ತು ಕುಕಿ ಸಮುದಾಯಗಳಿಗೆ ಸೇರಿದ ಮಣಿಪುರದ ಬಿಜೆಪಿ ಶಾಸಕರು ಒಂದೇ ಸೂರಿನಡಿಯಲ್ಲಿ ದೆಹಲಿಯಲ್ಲಿ ಭಾನುವಾರ ಸಭೆ ಸೇರಿ ಪಕ್ಷದ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ್ದಾರೆ.
ಈ ಸಭೆಯಲ್ಲಿ ಫೆಬ್ರವರಿಯಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದಲ್ಲಿ ಸರ್ಕಾರ ರಚನೆಯ ಬಗ್ಗೆ ಮಾತುಕತೆಗಳು ನಡೆದಿರಬಹುದು ಎನ್ನಲಾಗಿದೆ.
ರಾಷ್ಟ್ರಪತಿ ಆಳ್ವಿಕೆಯನ್ನು ಫೆಬ್ರವರಿ 2026 ರವರೆಗೆ ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ. ಇನ್ನೂ ಹೆಚ್ಚಿನ ವಿಸ್ತರಣೆಗೆ ಸಂಸದೀಯ ಅಥವಾ ಚುನಾವಣಾ ಆಯೋಗದ ಅನುಮೋದನೆ ಬೇಕಾಗುತ್ತದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ವಾರ ಮಣಿಪುರಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾಗ, “ಬೆಟ್ಟಗಳು ಮತ್ತು ಕಣಿವೆಗಳು ಯಾವಾಗಲೂ ಪರಸ್ಪರ ಪೂರಕವಾಗಿವೆ” ಎಂದು ಮಾತನಾಡಿದ್ದರು ಮತ್ತು ಶಾಂತಿ ಮತ್ತು ಸಾಮರಸ್ಯಕ್ಕೆ ಕರೆ ನೀಡಿದ್ದರು. ಅಂದರೆ ಕಣಿವೆ ಪ್ರದೇಶದಲ್ಲಿ ಮೈಟೈ ಸಮುದಾಯವು ಹೆಚ್ಚಾಗಿದೆ, ಆದರೆ ಕುಕಿ ಬುಡಕಟ್ಟು ಜನಾಂಗದವರು ಬೆಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



