
ಶ್ರೀನಗರ: ಅಂತರ್ಜಾಲದಲ್ಲಿ ನಡೆದ ಅಸಾಮಾನ್ಯ ಸಂಭಾಷಣೆಯನ್ನು ಪತ್ತೆ ಮಾಡುವ ಮೂಲಕ ಭಾರತೀಯ ಸೇನೆಯು ಅನುಮತಿಯಿಲ್ಲದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ್ದ ಚೀನಾದ ಪ್ರಜೆ ಬಂಧನಕ್ಕೊಳಗಾಗುವಂತೆ ಮಾಡಿದೆ.
ಸಂಭಾಷಣೆಯ ಜಾಡು ಹಿಡಿದ ಸೇನೆಯು ಕಾಶ್ಮೀರ ಕಣಿವೆಯ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿತು, ಇದು ಅನುಮತಿಯಿಲ್ಲದೆ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ್ದ ಚೀನಾದ ಪ್ರಜೆಯನ್ನು ಬಂಧಿಸಲು ಕಾರಣವಾಯಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
29 ವರ್ಷದ ಹು ಕೊಂಗ್ಟೈ ನವೆಂಬರ್ 19 ರಂದು ಪ್ರವಾಸಿ ವೀಸಾದಲ್ಲಿ ದೆಹಲಿಗೆ ಬಂದಿದ್ದ, ಇದು ವಾರಣಾಸಿ, ಆಗ್ರಾ, ನವದೆಹಲಿ, ಜೈಪುರ, ಸಾರನಾಥ್, ಗಯಾ ಮತ್ತು ಕುಶಿ ನಗರದಲ್ಲಿರುವ ಬೌದ್ಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವನಿಗೆ ಅವಕಾಶ ಮಾಡಿಕೊಟ್ಟಿತು.
ಆದರೆ, ನವೆಂಬರ್ 20 ರಂದು ಅವನು ಲೇಹ್ಗೆ ವಿಮಾನ ಹತ್ತಿದ್ದಾಣೆ ಮತ್ತು ಲೇಹ್ ವಿಮಾನ ನಿಲ್ದಾಣದಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಕೌಂಟರ್ನಲ್ಲಿ ನೋಂದಾಯಿಸಲಿಲ್ಲ.
ಅವನ ವಾಸ್ತವ್ಯದ ಸಮಯದಲ್ಲಿ, ಮೂರು ದಿನಗಳ ಕಾಲ ಝನ್ಸ್ಕರ್ ಪ್ರದೇಶದಲ್ಲಿ ಪ್ರವಾಸ ಮಾಡಿದ್ದ ಮತ್ತು ಡಿಸೆಂಬರ್ 1 ರಂದು ಶ್ರೀನಗರದಲ್ಲಿ ಇಳಿಯುವ ಮೊದಲು ಹಿಮಾಲಯನ್ ಪಟ್ಟಣದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವನ ಫೋನ್ ಇತಿಹಾಸವನ್ನು ಪರಿಶೀಲಿಸಿದಾಗ ಅವನು ಕಣಿವೆಯಲ್ಲಿ ಸಿಆರ್ಪಿಎಫ್ ನಿಯೋಜನೆಯ ಬಗ್ಗೆ ಹುಡುಕುತ್ತಿದ್ದ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ವಿವಿಧ ಸಂಸ್ಥೆಗಳು ಅವನನ್ನು ವಿಚಾರಣೆಗೆ ಒಳಪಡಿಸಿವೆ.
ಅಧಿಕಾರಿಗಳ ಪ್ರಕಾರ, ಅವರು ಮುಕ್ತ ಮಾರುಕಟ್ಟೆಯಿಂದ ಭಾರತೀಯ ಸಿಮ್ ಕಾರ್ಡ್ ಪಡೆಯು ವ್ಯವಸ್ಥೆ ಮಾಡಿಕೊಂಡಿದ್ದ.
ಶ್ರೀನಗರದಲ್ಲಿ ನೋಂದಾಯಿಸದ ಅತಿಥಿ ಗೃಹದಲ್ಲಿ ತಂಗಿದ್ದ, ಹರ್ವಾನ್ನಲ್ಲಿರುವ ಬೌದ್ಧ ಧಾರ್ಮಿಕ ಸ್ಥಳಕ್ಕೆ ಹೋಗಿದ್ದ, ಅಲ್ಲಿ ಕಳೆದ ವರ್ಷ ಒಂದು ಎನ್ಕೌಂಟರ್ನಲ್ಲಿ ಒಬ್ಬ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಾವನ್ನಪ್ಪಿದ್ದ.
ಅವರ ಫೋನ್ನಿಂದ ಹೊರತೆಗೆಯಲಾದ ಮಾಹಿತಿಯ ಪ್ರಕಾರ, ಅವನು ದಕ್ಷಿಣ ಕಾಶ್ಮೀರದ ವಿಕ್ಟರ್ ಫೋರ್ಸ್ ಪ್ರಧಾನ ಕಚೇರಿಯ ಬಳಿ ಇರುವ ದಕ್ಷಿಣ ಕಾಶ್ಮೀರದ ಅವಂತಿಪುರ ಅವಶೇಷಗಳಿಗೆ ಭೇಟಿ ನೀಡಿದ್ದ. ಶ್ರೀನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು, ಇದರಲ್ಲಿ ಶಂಕ್ರಾಚಾರ್ಯ ಬೆಟ್ಟಗಳು, ಹಜರತ್ಬಾಲ್ ಮತ್ತು ದಾಲ್ ಸರೋವರದ ಉದ್ದಕ್ಕೂ ಇರುವ ಮೊಘಲ್ ಉದ್ಯಾನ ಸೇರಿವೆ.
ಅವರ ಫೋನ್ ಇತಿಹಾಸವು ಸಿಆರ್ಪಿಎಫ್ ನಿಯೋಜನೆಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಲು ಆಗಸ್ಟ್ 2019 ರಲ್ಲಿ ರದ್ದುಗೊಳಿಸಲಾದ ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಹುಡುಕಾಟಗಳನ್ನು ತೋರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೂ ಬೋಸ್ಟನ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದು, ತನಗೆ ಪ್ರಯಾಣ ಇಷ್ಟ ಎಂದು ಹೇಳಿಕೊಂಡಿದ್ದಾನೆ. ಅವನ ಪಾಸ್ಪೋರ್ಟ್ನಲ್ಲಿ ಅವನು ಅಮೆರಿಕ, ನ್ಯೂಜಿಲೆಂಡ್, ಬ್ರೆಜಿಲ್ ಮತ್ತು ಫಿಜಿ ಮತ್ತು ಹಾಂಗ್ ಕಾಂಗ್ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾನೆ ಎಂದು ತೋರಿಸಲಾಗಿದೆ.
ಅವನು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಮತ್ತು ಹೆಚ್ಚೆಂದರೆ, ಅವನನ್ನು ಅವನ ದೇಶಕ್ಕೆ ಗಡೀಪಾರು ಮಾಡಬಹುದು ಎಂದು ಅಧಿಕಾರಿಗಳು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



