
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊಘಲ್ ಆಡಳಿತಗಾರರ ವಿರುದ್ಧ ತೀಕ್ಷ್ಣ ಟೀಕೆ ಮಾಡಿದ್ದು, “ಇಡೀ ದೇಶವನ್ನು ಇಸ್ಲಾಮೀಕರಣಗೊಳಿಸಲು” ಪ್ರಯತ್ನಿಸಿದರು ಮತ್ತು ಹಿಂದೂ ಚಿಹ್ನೆಗಳು ಮತ್ತು ಆಚರಣೆಗಳನ್ನು ಗುರಿಯಾಗಿಸಿಕೊಂಡರು ಎಂದಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೊಘಲ್ ಚಕ್ರವರ್ತಿ ಔರಂಗಜೇಬ ಹಿಂದೂಗಳ ವಿರುದ್ಧ ಧಾರ್ಮಿಕ ಕಿರುಕುಳವನ್ನು ತೀವ್ರಗೊಳಿಸಿದ ಮತ್ತು ಹಿಂದೂ ಸಂಪ್ರದಾಯಗಳನ್ನು ದುರ್ಬಲಗೊಳಿಸಲು ಬಲಪ್ರಯೋಗ ಮಾಡಿದ ಎಂದು ಆರೋಪಿಸಿದರು.
“ಇಡೀ ಭಾರತವನ್ನು ಇಸ್ಲಾಮೀಕರಣಗೊಳಿಸುವ ಅಭಿಯಾನವನ್ನು ಮೊಘಲರು ಪ್ರಾರಂಭಿಸಿದ್ದರು. ಔರಂಗಜೇಬ್ ತಿಲಕವನ್ನು ಅಳಿಸಿಹಾಕಲು ಮತ್ತು ಜನಿವಾರವನ್ನು ರದ್ದುಗೊಳಿಸಲು ಪ್ರಯತ್ನಿಸಿದ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿದ ದಬ್ಬಾಳಿಕೆ ಸೇರಿದಂತೆ ವ್ಯಾಪಕ ದೌರ್ಜನ್ಯಗಳನ್ನು ಎಸಗಿದ ಎಂದು ಆರೋಪಿಸಿದ್ದಾರೆ.
ಸಿಖ್ ಇತಿಹಾಸವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಈ ಸಮಯದಲ್ಲಿ ಗುರು ತೇಜ್ ಬಹದ್ದೂರ್ ಕಿರುಕುಳದ ವಿರುದ್ಧ ರಕ್ಷಕರಾಗಿ “ಎದ್ದುನಿಂತರು” ಎಂದು ಹೇಳಿದರು. ಗುರುಗಳ ಸಹಚರರು ಅನುಭವಿಸಿದ ಕ್ರೂರ ಚಿತ್ರಹಿಂಸೆಯನ್ನು ಅವರು ವಿವರಿಸಿದರು. “ಭಾಯಿ ಮತಿ ದಾಸ್ ಅವರನ್ನು ಮೊದಲು ಹಿಂಸಿಸಿ ಅವರನ್ನು ಹತ್ತಿಯಲ್ಲಿ ಸುತ್ತಿ ಬೆಂಕಿ ಹಚ್ಚಲಾಯಿತು, ಮತ್ತು ಭಾಯಿ ದಯಾಲ ಅವರನ್ನು ಕುದಿಯುವ ನೀರಿನ ತೊಟ್ಟಿಗೆ ಎಸೆಯಲಾಯಿತು. ಈ ತ್ಯಾಗಗಳ ಹೊರತಾಗಿಯೂ, ಗುರು ತೇಗ್ ಬಹದ್ದೂರ್ ಜಿ ಮಹಾರಾಜ್ ತಮ್ಮ ನಂಬಿಕೆ ಮತ್ತು ಸಂಕಲ್ಪದಲ್ಲಿ ದೃಢವಾಗಿ ಉಳಿದರು” ಎಂದು ಯೋಗಿ ಹೇಳಿದ್ದಾರೆ.
ತೇಗ್ ಬಹದ್ದೂರ್ ನಮ್ಮೆಲ್ಲರಿಗೂ ಸ್ಫೂರ್ತಿಯ ಮೂಲ ಎಂದು ಕರೆದ ಆದಿತ್ಯನಾಥ್, ಔರಂಗಜೇಬನ ಕ್ರೌರ್ಯಗಳ ವಿರುದ್ಧ ಧ್ವನಿ ಎತ್ತಿದರು. ದಬ್ಬಾಳಿಕೆಯ ಕೃತ್ಯಗಳನ್ನು ವಿರೋಧಿಸಲು ನಮ್ಮನ್ನು ಸಿದ್ಧಪಡಿಸಿದರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



