ಬೈಂದೂರು: ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಇಂದು ಚರ್ಚೆ ನಡೆಸಿದರು ಹಾಗೂ ಪರಿಹಾರ ಕ್ರಮಕ್ಕೆ ಒತ್ತಾಯಿಸಿದರು.
ಅವರು ನಡೆಸಿದ ಪ್ರಮುಖ ವರ್ಚೆಗಳ ವಿವರ ಇಂತಿದೆ:
* ರಾಷ್ಟೀಯ ಹೆದ್ದಾರಿ 766 ಸಿ ( ಬೈಂದೂರು ರಾಣೆಬೆನ್ನೂರು) ರಸ್ತೆ ಭೂ ಸ್ವಾಧೀನ ಪ್ರಕ್ರಿಯೆ,ಮರಗಳ ತೆರವು ಹಾಗೂ ಪರಿಹಾರ ಕ್ರಮ ತ್ವರಿತ ಗೊಳಿಸುವುದು.
* ಅಕ್ರಮ ಸಕ್ರಮ ಅರ್ಜಿಗಳನ್ನು ತ್ವರಿತ ವಿಲೇವಾರಿ ಮತ್ತು ಎ.ಸಿ ಕೋರ್ಟ್, ಡಿಸಿ ಕೋರ್ಟ್ ನಲ್ಲಿ ವಿಚಾರಣೆ ಮುಕ್ತಾಯ ಆಗಿರುವ, ಬಗರ್ ಹುಕುಂ ತಂತ್ರಾಂಶದಲ್ಲಿ ಬಿಟ್ಟು ಹೋಗಿರುವ ಅರ್ಜಿ ಗಳ ಸೇರ್ಪಡೆ, ಭಾಗಶ: ಡಿಮ್ಡ್ ಫಾರೆಸ್ಟ್ ಜಂಟಿ ಸರ್ವೇ ಕಾರ್ಯ ನಿಧಾನ ಗತಿಯಲ್ಲಿ ಇರುವುದನ್ನು ತ್ವರಿತಗೊಳಿಸುವುದು.
* ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ಮೀನುಗಾರಿಕೆ, ನೀರಾವರಿ ಯೋಜನೆಗಳ ಅನುಷ್ಠಾನ ಚುರುಕು ಗೊಳಿಸುವುದು ಹಾಗೂ ಹೊಸ ಪ್ರಸ್ತಾವನೆ ಗಳ ತಯಾರಿ.
* ಕ್ಷೇತ್ರ ವ್ಯಾಪ್ತಿಯ ಸಾಕಷ್ಟು ಗ್ರಾಮೀಣ ರಸ್ತೆಗಳು, ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಶಿಥಿಲಾ ವಸ್ಥೆಯಲ್ಲಿದ್ದು ಅಭಿವೃದ್ಧಿ ಪಡಿಸಲು ಪ್ರಾಕೃತಿಕ ವಿಕೋಪ ಅನುದಾನ ಹಾಗೂ ಗಣಿ ಬಾಧಿತ ಗ್ರಾಮಗಳ ಮೂಲ ಸೌಕರ್ಯ ಕಾಮಗಾರಿಗಳಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಡಿ ಅನುದಾನ ಒದಗಿಸುವುದು.
* ವಂಡ್ಸೆ ನಾಡ ಕಚೇರಿಗೆ ನಿವೇಶನ ಮಂಜೂರು, ಜಡ್ಕಲ್ ಮೂದುರು ಹಾಗೂ ಕೊಲ್ಲೂರು ಗ್ರಾಮದ ಸರ್ವೇ ಸಮಸ್ಯೆಗಳು ಮತ್ತು ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವುದು.
* ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಸೇವೆ ಹಾಗೂ ಕಚೇರಿ ವ್ಯವಸ್ಥೆಯಲ್ಲಿ ಸೂಕ್ತ ಸಮನ್ವಯದಿಂದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಾರ್ವಜನಿಕ ಮಹತ್ವದ ವಿಚಾರಗಳ ಕಡೆಗೆ ಗಮನ ವಹಿಸುವುದು. ಸೇರಿದಂತೆ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಾರ್ವಜನಿಕ ಹಿತದ ಇನ್ನಿತರ ಹಲವಾರು ವಿಚಾರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ಷೇತ್ರದ ಸಮಸ್ಯೆಗಳ ಕಡೆಗೆ ಗಮನ ಹರಿಸಲು ಶಾಸಕರು ಮನವಿ ಮಾಡಿದರು.
ಚರ್ಚೆಯಲ್ಲಿ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.