ನವದೆಹಲಿ: NCERT ಪಠ್ಯ ಪುಸ್ತಕದಲ್ಲಿ ಬರೀ ಮೊಘಲರ ಬಗ್ಗೆಯೇ ಯಾಕೆ ಅಧ್ಯಾಯಗಳು ಇವೆ? ದಕ್ಷಿಣ ಸಾಮ್ರಾಜ್ಯಗಳಾದ ಚೋಳ, ಪಲ್ಲವರು ಮುಂತಾದವರ ಬಗ್ಗೆ ಯಾಕೆ ಕಡಿಮೆ ಅಧ್ಯಾಯಗಳು ಇವೆ? ಎಂದು ಬಾಲಿವುಡ್ನ ಖ್ಯಾತ ನಟ ಆರ್.ಮಾಧವನ್ ಪ್ರಶ್ನೆ ಮಾಡಿದ್ದಾರೆ. ತಮಿಳನ್ನು ‘ವಿಶ್ವದ ಅತ್ಯಂತ ಹಳೆಯ ಭಾಷೆ’ ಎಂದು ಕರೆದ ನಟ, ಜೈನ ಧರ್ಮ, ಬೌದ್ಧ ಧರ್ಮ ಮತ್ತು ಹಿಂದೂ ಧರ್ಮಗಳು ಚೀನಾಗೆ ಹರಡಿದ ಬಗ್ಗೆ ಕಲಿಯಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅಧ್ಯಾಯಗಳು ಪಠ್ಯದಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. NCERT ಇತಿಹಾಸ ಪಠ್ಯ ಪುಸ್ತಕದಲ್ಲಿ ಮೊಘಲರ ಕುರಿತಾದ ಎಂಟು ಅಧ್ಯಾಯಗಳು ಇರುವುದನ್ನು ಅವರು ಖಂಡಿಸಿದ್ದಾರೆ.
“ಈ ಹೇಳಿಕೆಯಿಂದ ನಾನು ತೊಂದರೆಗೆ ಸಿಲುಕಬಹುದು, ಆದರೂ ನಾನು ಹೇಳುತ್ತೇನೆ. ನಾನು ಶಾಲೆಯಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದಾಗ, ಮೊಘಲರ ಬಗ್ಗೆ ಎಂಟು ಅಧ್ಯಾಯಗಳು, ಹರಪ್ಪ ಮತ್ತು ಮೊಹೆಂಜೊ-ದಾರೊ ನಾಗರಿಕತೆಗಳ ಬಗ್ಗೆ ಎರಡು, ಬ್ರಿಟಿಷ್ ಆಳ್ವಿಕೆ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಾಲ್ಕು ಮತ್ತು ದಕ್ಷಿಣ ರಾಜ್ಯಗಳಾದ ಚೋಳರು, ಪಾಂಡ್ಯರು, ಪಲ್ಲವರು ಮತ್ತು ಚೇರರ ಬಗ್ಗೆ ಕೇವಲ ಒಂದು ಅಧ್ಯಾಯವಿತ್ತು” ಎಂದು ಅವರು ಹೇಳಿದ್ದಾರೆ. NCERT ಪಠ್ಯ ಪುಸ್ತಕ ಬದಲಾವಣೆ ವಿಷಯದಲ್ಲಿ ಎದ್ದಿರುವ ವಿವಾದದ ನಡುವೆ ಅವರು ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. XII ತರಗತಿಯ ಪುಸ್ತಕಗಳಿಂದ ಮೊಘಲರು ಮತ್ತು ದೆಹಲಿ ಸುಲ್ತಾನರ ಕುರಿತಾದ ವಿಭಾಗಗಳನ್ನು ತೆಗೆದುಹಾಕುವ ನಿರ್ಧಾರವನ್ನು ಅದು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸುದ್ದಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.