ನವದೆಹಲಿ: 2008 ರಲ್ಲಿ ಮುಂಬೈನಲ್ಲಿ ಹತ್ಯಾಕಾಂಡ ನಡೆಸಿ ಭಾರತೀಯ ಭದ್ರತಾ ಪಡೆಗಳಿಂದ ಹತ್ಯೆಗೊಳಗಾದ ಒಂಬತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕರಿಗೆ ಪಾಕಿಸ್ಥಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ನಿಶಾನ್-ಎ-ಹೈದರ್ ಅನ್ನು ನೀಡಲು ದಾಳಿಯ ಹಿಂದಿನ ಸೂತ್ರಧಾರಿ ತಹವ್ವೂರ್ ರಾಣಾ ಬಯಸಿದ್ದ ಎಂದು ಯುಎಸ್ ಮೂಲಗಳು ತಿಳಿಸಿದೆ.
ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಣಾ ಮತ್ತು ಡೇವಿಡ್ ಹೆಡ್ಲಿ ನಡುವಿನ ಸಂಭಾಷಣೆಯನ್ನು ಬಯಲು ಮಾಡಲಾಗಿದೆ, ಮುಂಬೈ ದಾಳಿಯ ನಂತರ, ರಾಣಾ ಹೆಡ್ಲಿಯೊಂದಿಗೆ ಮಾತನಾಡಿ ಭಾರತೀಯರು ಇಂತಹ ದಾಳಿಗೆ ಅರ್ಹರು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
“ದಾಳಿಗಳು ಪೂರ್ಣಗೊಂಡ ನಂತರ, ರಾಣಾ ಹೆಡ್ಲಿಗೆ ಭಾರತೀಯರು ಇಂತಹ ದಾಳಿಗೆ ‘ಅರ್ಹರು’ ಎಂದು ಹೇಳಿದ್ದಾನೆ. ಹೆಡ್ಲಿಯೊಂದಿಗಿನ ಸಂಭಾಷಣೆಯಲ್ಲಿ, ದಾಳಿಗಳನ್ನು ನಡೆಸಿ ಕೊಲ್ಲಲ್ಪಟ್ಟ ಒಂಬತ್ತು ಎಲ್ಇಟಿ ಭಯೋತ್ಪಾದಕರನ್ನು ರಾಣಾ ಶ್ಲಾಘಿಸಿದ್ದಾನೆ. ಅವರಿಗೆ ನಿಶಾನ್ ಎ ಹೈದರ್ ನೀಡಲು ಬಯಸಿದ್ದ, ಇದು ಪಾಕಿಸ್ತಾನದ ‘ಯುದ್ಧ ಶೌರ್ಯಕ್ಕಾಗಿನ ಅತ್ಯುನ್ನತ ಪ್ರಶಸ್ತಿ’, ಇದು ಹುತಾತ್ಮ ಸೈನಿಕರಿಗೆ ಮೀಸಲಾಗಿರುವ ಪ್ರಶಸ್ತಿ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ 10 ಕ್ರಿಮಿನಲ್ ಆರೋಪಗಳನ್ನು ರಾಣಾ ಭಾರತದಲ್ಲಿ ಎದುರಿಸಲಿದ್ದೇನೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಣಾ ಅಮೆರಿಕದಲ್ಲಿ ಶಿಕ್ಷೆಗೊಳಗಾದ ಭಯೋತ್ಪಾದಕ, ಕೆನಡಾದ ಪ್ರಜೆ ಮತ್ತು ಪಾಕಿಸ್ತಾನದ ನಿವಾಸಿ ಎಂದು ಯುಎಸ್ ಬಣ್ಣಿಸಿದೆ. ಬುಧವಾರ, ವಾಷಿಂಗ್ಟನ್ ರಾಣಾ ನನ್ನು ಭಾರತಕ್ಕೆ ಹಸ್ತಾಂತರಿಸಿತು. ಆರು ಅಮೆರಿಕನ್ನರು ಸೇರಿದಂತೆ ಘೋರ ದಾಳಿಯಲ್ಲಿ ಸಾವನ್ನಪ್ಪಿದ ಹಲವಾರು ಬಲಿಪಶುಗಳಿಗೆ ನ್ಯಾಯ ಒದಗಿಸುವಲ್ಲಿ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.