ನವದೆಹಲಿ: ಭಾರತದ ಅತಿದೊಡ್ಡ ಧಾರ್ಮಿಕ ಸಭೆ ಮಹಾಕುಂಭದ ಆಧ್ಯಾತ್ಮಿಕ ಪರಂಪರೆಯನ್ನು ವಿಸ್ತರಿಸುವ ಮೊದಲ ಉಪಕ್ರಮವಾಗಿ, ಉತ್ತರ ಪ್ರದೇಶ ಸರ್ಕಾರವು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮವಾದ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ಜರ್ಮನಿಯ ಭಕ್ತರಿಗೆ ರವಾನಿಸಿದೆ. 2025 ರ ಪ್ರಯಾಗರಾಜ್ ಮಹಾ ಕುಂಭಮೇಳ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಜಾಗತಿಕ ಸಂಪರ್ಕ ಪ್ರಯತ್ನದ ಆರಂಭವನ್ನು ಇದು ಸೂಚಿಸುತ್ತದೆ.
ಉತ್ತರಪ್ರದೇಶ ಸರ್ಕಾರವು ತ್ರಿವೇಣಿ ಸಂಗಮದ ಪವಿತ್ರ ನೀರನ್ನು ಜರ್ಮನಿಗೆ ರವಾನಿಸುವ ಮೂಲಕ ಅಲ್ಲಿನ ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುವ ಅವಕಾಶ ಕಲ್ಪಿಸಿದೆ. ಮಹಾ ಕುಂಭಮೇಳ ಯಶಸ್ವಿಯಾಗಿ ಮುಕ್ತಾಯಗೊಂಡ ನಂತರ ಜಾಗತಿಕ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಉತ್ತರಪ್ರದೇಶ ಸರ್ಕಾರ ಆರಂಭಿಸಿದ್ದು, ಈ ಮೂಲಕ ಪವಿತ್ರ ಜಲವನ್ನು ವಿವಿಧ ದೇಶಗಳಿಗೆ ತಲುಪಿಸುವ ಕಾರ್ಯಕ್ಕೆ ಕೈ ಹಾಕಿದೆ.
ತ್ರಿವೇಣಿ ಸಂಗಮದಿಂದ 250 ಮಿಲಿ ಪವಿತ್ರ ನೀರನ್ನು ಹೊಂದಿರುವ 1,000 ಗಾಜಿನ ಬಾಟಲಿಗಳನ್ನು ಪ್ರಯಾಗರಾಜ್ನಿಂದ ಜರ್ಮನಿಗೆ ರವಾನಿಸಲಾಗಿದೆ. ಈ ಉಪಕ್ರಮವು ಜನವರಿ 13 ರಿಂದ ಫೆಬ್ರವರಿ 26, 2025 ರವರೆಗೆ ನಡೆದ ಮಹಾ ಕುಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಲಕ್ಷಾಂತರ ಭಕ್ತರನ್ನು ಸಂಪರ್ಕಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಶುದ್ಧೀಕರಣ, ಆಧ್ಯಾತ್ಮಿಕತೆ ಮತ್ತು ದೈವಿಕ ಆಶೀರ್ವಾದಗಳ ಪವಿತ್ರ ಸಂಕೇತವೆಂದು ಪೂಜಿಸಲ್ಪಡುವ ತ್ರಿವೇಣಿ ಸಂಗಮ ನೀರಿಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಬೇಡಿಕೆಯೂ ಈ ಉಪಕ್ರಮಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.