ವಾಷಿಂಗ್ಟನ್: 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹಾವೂರ್ ರಾಣಾ ಅವರ ಗಡೀಪಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆರೋಪಗಳನ್ನು ಎದುರಿಸಲು ರಾಣಾ ಅವರನ್ನು ಭಾರತಕ್ಕೆ ಮರಳಿ ಕರೆತರಲು ಅಮೆರಿಕದ ಸುಪ್ರೀಂಕೋರ್ಟ್ನ ತೀರ್ಪು ದಾರಿ ಮಾಡಿಕೊಟ್ಟಿದೆ.
ಪ್ರಸ್ತುತ ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿರುವ 64 ವರ್ಷದ ರಾಣಾ, ಫೆಬ್ರವರಿಯಲ್ಲಿ ಒಂಬತ್ತನೇ ಸರ್ಕ್ಯೂಟ್ನ ಸರ್ಕ್ಯೂಟ್ ನ್ಯಾಯಾಧೀಶರಿಗೆ ಹಸ್ತಾಂತರಕ್ಕೆ ತಡೆ ನೀಡುವಂತೆ ತುರ್ತು ಅರ್ಜಿಯನ್ನು ಸಲ್ಲಿಸಿದ್ದ. ಆದರೆ ಅದನ್ನು ಕಳೆದ ತಿಂಗಳು ತಿರಸ್ಕರಿಸಲಾಯಿತು.
ಇದರ ನಂತರ, ರಾಣಾ ತಮ್ಮ ತುರ್ತು ಅರ್ಜಿಯನ್ನು ನವೀಕರಿಸಿ, ಅದನ್ನು ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ಗೆ ಸಲ್ಲಿಸಿದ್ದ. ಈ ನವೀಕರಿಸಿದ ಅರ್ಜಿಯನ್ನು ಏಪ್ರಿಲ್ 4 ರಂದು ಸಲ್ಲಿಸಲಾಗಿತ್ತು.
ಸೋಮವಾರ, ಸುಪ್ರೀಂಕೋರ್ಟ್ ವೆಬ್ಸೈಟ್ “ನ್ಯಾಯಾಲಯದಿಂದ ಅರ್ಜಿ ನಿರಾಕರಿಸಲಾಗಿದೆ” ಎಂಬ ಸೂಚನೆಯನ್ನು ಪೋಸ್ಟ್ ಮಾಡಿದೆ.
ಭಾರತವು ಹಲವಾರು ವರ್ಷಗಳಿಂದ ರಾಣಾ ಅವರ ಗಡೀಪಾರುಗಾಗಿ ಒತ್ತಾಯಿಸುತ್ತಿದೆ. ಭಾರತ ಆಗಸ್ಟ್ 2018 ರಲ್ಲಿ ಅವರ ಬಂಧನಕ್ಕೆ ವಾರಂಟ್ ಹೊರಡಿಸಿದೆ.
ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಸ್ತಾಂತರವನ್ನು ಘೋಷಿಸಿದರು, ಅನು ಭಾರತದಲ್ಲಿ ನ್ಯಾಯಾಂಗವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
“ನನ್ನ ಆಡಳಿತವು ಸಂಚುಕೋರರಲ್ಲಿ ಒಬ್ಬ, ವಿಶ್ವದ ಅತ್ಯಂತ ದುಷ್ಟ ಜನರಲ್ಲಿ ಒಬ್ಬ ತಹವ್ವೂರ್ ರಾಣಾನನ್ನು ಭಾರತದಲ್ಲಿ ನ್ಯಾಯಾಂಗ ಎದುರಿಸಲು ಹಸ್ತಾಂತರಿಸಲು ಅನುಮೋದನೆ ನೀಡಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಅವನು ನ್ಯಾಯವನ್ನು ಎದುರಿಸಲು ಭಾರತಕ್ಕೆ ಹಿಂತಿರುಗುತ್ತಾನೆ” ಎಂದು ಟ್ರಂಪ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.