ಭೋಪಾಲ್: ಹಿಂದೂ ಗ್ರಾಮ ನಿರ್ಮಾಣದ ಕನಸನ್ನು ನನಸಾಗಿಸಲು ಬಾಗೇಶ್ವರ ಧಾಮದ ಬಾಬಾ ಧೀರೇಂದ್ರ ಶಾಸ್ತ್ರಿ ಸಜ್ಜಾಗಿದ್ದಾರೆ. ಹಿಂದೂ ಗ್ರಾಮ ಪರಿಕಲ್ಪನೆ ಇಡೀ ದೇಶದಲ್ಲಿಯೇ ಮೊದಲನೆಯದ್ದಾಗಿದ್ದು, ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಇದನ್ನು ನಿರ್ಮಿಸಲಾಗುತ್ತಿದ. ಸುಮಾರು ಒಂದು ಸಾವಿರ ಹಿಂದೂ ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಲಿವೆ.
ಈ ಗ್ರಾಮಕ್ಕಾಗಿ ‘ಭೂಮಿ ಪೂಜೆ’ಯನ್ನು ಬಾಬಾ ಬಾಗೇಶ್ವರ್ ಅವರು ಈಗಾಗಲೇ ನೆರವೇರಿಸಿದ್ದು, ಇದಕ್ಕಾಗಿ ಭಾಗೇಶ್ವರ ಧಾಮ್ ಜನ ಸೇವಾ ಸಮಿತಿ ಭೂಮಿಯನ್ನು ಒದಗಿಸಿದೆ. ನಿವಾಸಿಗಳು ಮನೆಗಳ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಬೇಕಾಗುತ್ತದೆ. ಈ ಗ್ರಾಮದಲ್ಲಿ ನೆಲೆಗೊಂಡ ಬಳಿಕ ಕುಟುಂಬಗಳು ಮನೆಯನ್ನು ಮಾರಾಟ ಮಾಡುವಂತಿಲ್ಲ, ಅವರು ಜೀವಂತ ಇರುವವರೆಗೂ ಮನೆ ಅವರದ್ದೇ ಆಗಿರುತ್ತದೆ.
“ಅನೇಕ ಹಿಂದೂ ಕುಟುಂಬಗಳು ಒಟ್ಟಾಗಿ ಹಿಂದೂ ಸಮಾಜವನ್ನು ರೂಪಿಸುತ್ತವೆ ಮತ್ತು ನಂತರ ಹಿಂದೂ ಗ್ರಾಮಗಳು ನಿರ್ಮಾಣವಾಗುತ್ತವೆ. ಮುಂದೆ ಹಿಂದೂ ತಹಸಿಲ್ಗಳು, ಜಿಲ್ಲೆಗಳು ಮತ್ತು ರಾಜ್ಯಗಳು ಸೇರಿ ಹಿಂದೂ ರಾಷ್ಟ್ರವಾಗುತ್ತದೆ ಎಂದು ಬಾಬಾ ಬಾಗೇಶ್ವರ್ ಹೇಳಿದ್ದಾರೆ.
ಇನ್ನು ಎರಡು ವರ್ಷಗಳಲ್ಲಿ ಈ ಗ್ರಾಮವನ್ನು ನಿರ್ಮಿಸಲಾಗುತ್ತದೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.