ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕೊಡುಗೆ ನೀಡುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ದೇಶದ ಬೆಳೆಯುತ್ತಿರುವ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ಆಶಿಸುತ್ತಿದ್ದಾರೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ವಿಸ್ತೃತ ಕಾರ್ಯಾಚರಣೆಯಿಂದ ಭೂಮಿಗೆ ಹಿಂದಿರುಗಿದ ಕೆಲವೇ ದಿನಗಳ ನಂತರ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದರು.
ಬಾಹ್ಯಾಕಾಶದಿಂದ ಭಾರತವನ್ನು ನೋಡುವ ತನ್ನ ಅದ್ಭುತ ಅನುಭವವನ್ನು ನೆನಪಿಸಿಕೊಂಡಿರುವ ವಿಲಿಯಮ್ಸ್ ಭಾರತವನ್ನು ಅತಯಂತ ಸರಳ ಆದರೆ ಆಳವಾದ ಪದಗಳಲ್ಲಿ ವಿವರಿಸಿದ್ದಾರೆ. “ಅದ್ಭುತ, ಕೇವಲ ಅದ್ಭುತ” ಎಂದು ಭಾರತವನ್ನು ಬಣ್ಣಿಸಿದ್ದಾರೆ. ತನ್ನ ಭಾರತೀಯ ಪರಂಪರೆಗಾಗಿ ಹೆಸರುವಾಸಿಯಾದ ಅವರು ಹಿಮಾಲಯದ ವಿಹಂಗಮ ದೃಶ್ಯದಿಂದ ವಿಶೇಷವಾಗಿ ಆಕರ್ಷಿತರಾಗಿದ್ದಾರೆ.
“ಭಾರತವನ್ನು ಬಾಹ್ಯಾಕಾಶದಿಂದ ನೋಡುವುದು ಆಳವಾಗಿ ವೈಯಕ್ತಿಕವೆನಿಸಿತು, ನನ್ನ ಬೇರುಗಳೊಂದಿಗಿನ ಸಂಪರ್ಕದ ಅನುಭವವಾಯಿತು. ಕರಾವಳಿಯ ಮೀನುಗಾರಿಕಾ ಹಡಗುಗಳು ಪರಿಚಿತ ಹೆಗ್ಗುರುತಾಗಿ ಕಂಡವು, ಮನೆಗೆ ಮರಳುವ ಭಾವನೆಯನ್ನು ಉಂಟುಮಾಡುವ ಗುಜರಾತ್ ಮತ್ತು ಮುಂಬೈಯನ್ನು ಮೇಲಿನಿಂದ ನೋಡುವುದನ್ನು ಅದ್ಭುತವಾಗಿತ್ತು” ಎಂದು ಅವರು ವಿವರಿಸಿದ್ದಾರೆ.
ಭಾರತದಲ್ಲಿ ಜನಿಸಿದ 59 ವರ್ಷದ ಗಗನಯಾತ್ರಿ, ಶೀಘ್ರದಲ್ಲೇ ತನ್ನ ತಂದೆಯ ತಾಯ್ನಾಡು ಭಾರತಕ್ಕೆ ಭೇಟಿ ನೀಡುವ ಬಲವಾದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.