ಭೋಪಾಲ್: ಮಧ್ಯಪ್ರದೇಶ ಸರ್ಕಾರ ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ, ಚಿತ್ರಕೂಟ ಮತ್ತು ಮೈಹಾರ್ ಸೇರಿದಂತೆ ಮಧ್ಯಪ್ರದೇಶದ 19 ಧಾರ್ಮಿಕ ನಗರಗಳು ಮತ್ತು ಆಯ್ದ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಮಂಗಳವಾರದಿಂದ ಮದ್ಯ ನಿಷೇಧ ಜಾರಿಗೆ ತಂದಿದೆ.
ಈ ಪ್ರದೇಶದಲ್ಲಿನ ಎಲ್ಲಾ ಬಾರ್ ಮತ್ತು ವೈನ್ಶಾಪ್ಗಳು ಇಂದಿನಿಂದ ಮುಚ್ಚಡಲ್ಪಡಲಿವೆ. ಜನವರಿ 24 ರಂದು ರಾಣಿ ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ಗೌರವಾರ್ಥ ಮಹೇಶ್ವರ ಪಟ್ಟಣದಲ್ಲಿ ನಡೆಸಿದ ಸಭೆಯಲ್ಲಿ ಸಚಿವ ಸಂಪುಟ ಈ ನಿರ್ಧಾರವನ್ನು ಅನುಮೋದಿಸಿತ್ತು. “ವ್ಯಸನ ಮುಕ್ತಿಯತ್ತ ಐತಿಹಾಸಿಕ ಹೆಜ್ಜೆ ಇಟ್ಟಿದ್ದೇವೆ, ಸಾರ್ವಜನಿಕ ನಂಬಿಕೆ ಮತ್ತು ಧಾರ್ಮಿಕ ಭಕ್ತಿಯನ್ನು ಗೌರವಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
ಬಿಜೆಪಿ ಸರ್ಕಾರವು ಈ 19 ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು “ಸಂಪೂರ್ಣವಾಗಿ ಪವಿತ್ರ” ಪ್ರದೇಶಗಳೆಂದು ಘೋಷಿಸಿದೆ ಮತ್ತು ಅವುಗಳ ವ್ಯಾಪ್ತಿಯಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಯಾದವ್ ಹೇಳಿಕೆಯಲ್ಲಿ “ಸರ್ಕಾರವು ವ್ಯಸನ ಮುಕ್ತಿಯತ್ತ ಐತಿಹಾಸಿಕ ಹೆಜ್ಜೆ ಇಟ್ಟಿದೆ ಮತ್ತು ಈ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಸಾರ್ವಜನಿಕ ನಂಬಿಕೆ ಮತ್ತು ಧಾರ್ಮಿಕ ಭಕ್ತಿಗೆ ಅನುಗುಣವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ” ಎಂದು ಉಲ್ಲೇಖಿಸಿದ್ದಾರೆ.
ಮಂಗಳವಾರದಿಂದ ಮದ್ಯ ನಿಷೇಧ ಜಾರಿಗೆ ಬರುವ ಧಾರ್ಮಿಕ ಸ್ಥಳಗಳು ಒಂದು ಪುರಸಭೆ, 12 ಪುರಸಭೆಗಳು ಮತ್ತು ಸಮಾನ ಸಂಖ್ಯೆಯ ಗ್ರಾಮ ಪಂಚಾಯತ್ಗಳಲ್ಲಿ ಹರಡಿವೆ. ಇವುಗಳಲ್ಲಿ, ಉಜ್ಜಯಿನಿ ಶಿವನಿಗೆ ಅರ್ಪಿತವಾದ ಪ್ರಸಿದ್ಧ ಮಹಾಕಾಳ ದೇವಾಲಯವನ್ನು ಹೊಂದಿದೆ, ಅಮರಕಂಟಕ್ ನರ್ಮದಾ ನದಿಯ ಮೂಲವಾಗಿದೆ, ಇದನ್ನು ರಾಜ್ಯದ ಜೀವನಾಡಿ ಎಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.