ನವದೆಹಲಿ: ಭಾರತೀಯ ಪುರಾತತ್ವ ಸಮೀಕ್ಷೆಯ ಅಂಡರ್ವಾಟರ್ ಆರ್ಕಿಯಾಲಜಿ ವಿಂಗ್ (UAW) ತಂಡವು ಅದರ ಹೆಚ್ಚುವರಿ ಮಹಾನಿರ್ದೇಶಕ (ADG) ಪ್ರೊಫೆಸರ್ ಅಲೋಕ್ ತ್ರಿಪಾಠಿ ನೇತೃತ್ವದಲ್ಲಿ ಗುಜರಾತ್ನ ದ್ವಾರಕಾ ಮತ್ತು ಬೆಟ್ ದ್ವಾರಕಾದಲ್ಲಿ ಮತ್ತೊಂದು ಸುತ್ತಿನ ಕಡಲತೀರ ಮತ್ತು ಕಡಲಾಚೆಯ ಪರಿಶೋಧನೆ ಕೈಗೊಂಡಿದೆ.
ಎರಡು ದಶಕಗಳ ನಂತರ ಈ ಪ್ರದೇಶದಲ್ಲಿ ಹೊಸ ಅನ್ವೇಷಣೆಯನ್ನು ಪ್ರಾರಂಭಿಸಲಾಗಿದೆ. ಮೊದಲ ಬಾರಿಗೆ, ಪರಿಶೋಧನಾ ತಂಡವು ಮಹಿಳಾ ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡಿದೆ.
ಪ್ರಸ್ತುತ ಅಧ್ಯಯನದ ಭಾಗವಾಗಿ, ಓಖಮಂಡಲ್ನಲ್ಲಿ ವಿಸ್ತೃತ ಪ್ರದೇಶವನ್ನು ಒಳಗೊಂಡು ಅನ್ವೇಷಣೆ ಮಾಡುವುದು ಪ್ರಮುಖ ಯೋಜನೆಯಾಗಿದೆ. ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಪುರಾತತ್ತ್ವಜ್ಞರ ತಂಡಗಳು ಪ್ರದೇಶದಲ್ಲಿ ಇತರ ಸಂಭಾವ್ಯ ತಾಣಗಳನ್ನು ಹುಡುಕುತ್ತಿವೆ ಎಂದು ASI ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಯನವು ಪುರಾತತ್ವ ಪರಿಶೋಧನೆಗಳು, ಸಂಭಾವ್ಯ ತಾಣಗಳು ಮತ್ತು ಸ್ಥಳಗಳ ಗುರುತಿಸುವಿಕೆ, ಡೈವಿಂಗ್ ಕಾರ್ಯಾಚರಣೆಗಳನ್ನು ಒಳಗೊಂಡ ವೈಜ್ಞಾನಿಕ ಅಧ್ಯಯನ, ಹುಡುಕಾಟವನ್ನು ಒಳಗೊಂಡಿರುತ್ತದೆ. ತಂಡವು ಪುರಾತತ್ವ ಅವಶೇಷಗಳ ಸಂಗ್ರಹ, ಅವುಗಳ ಸರಿಯಾದ ದಾಖಲಾತಿ ಮತ್ತು ವೈಜ್ಞಾನಿಕ ವಿಶ್ಲೇಷಣೆ ಮತ್ತು ಅಧ್ಯಯನಗಳನ್ನು ಒಳಗೊಂಡ ಸಂಶೋಧನೆಯನ್ನು ಸಹ ಮಾಡುತ್ತದೆ.
ಐತಿಹಾಸಿಕ, ಪುರಾತತ್ವ ಮತ್ತು ಸಾಂಸ್ಕೃತಿಕ ದೃಷ್ಟಿಕೋನದಿಂದ ದ್ವಾರಕಾ ಒಂದು ಪ್ರಮುಖ ಸ್ಥಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ದ್ವಾರಕವು ಪ್ರಾಚೀನ ಸಾಹಿತ್ಯದಲ್ಲಿ ಯಾವಾಗಲೂ ಸಂಶೋಧನೆಯ ವಿಷಯವಾಗಿದೆ. ಇದು ಭಾರತದ ಸಾಂಸ್ಕೃತಿಕ ಇತಿಹಾಸದ ಮಹತ್ವದ ಭಾಗವಾಗಿ ಉಳಿದಿದೆ. ಇದರ ಪ್ರಾಮುಖ್ಯತೆಯನ್ನು ಪರಿಗಣಿಸಿ, ದ್ವಾರಕವನ್ನು ಹಿಂದೆಯೂ ಇತಿಹಾಸಕಾರರು ಮತ್ತು ಪುರಾತತ್ತ್ವಜ್ಞರು ಅನ್ವೇಷಿಸಿದ್ದಾರೆ ಮತ್ತು ಸಂಶೋಧಿಸಿದ್ದಾರೆ” ಎಂದು ಅಧಿಕಾರಿಗಳು ಹೇಳಿದರು.
ಗುಜರಾತ್ನ ಕರಾವಳಿ ಪ್ರದೇಶದಲ್ಲಿರುವ ದ್ವಾರಕ ಮತ್ತು ಬೇಟ್ ದ್ವಾರಕ, ನೀರಿನಲ್ಲಿ ಮುಳುಗಿರುವ ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.