ಕಠ್ಮಂಡು: ನೇಪಾಳದಲ್ಲಿ ಮತ್ತೆ ರಾಜಾಡಳಿತವನ್ನು ಸ್ಥಾಪಿಸಲು ಹಾಗೂ ಪುನಃ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಆಗ್ರಹಿಸಿ ದೊಡ್ಡ ಮಟ್ಟದ ಜನಾಂದೋಲನ ಶುರುವಾಗಿದೆ. ನಿನ್ನೆ ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಅಲ್ಲಿನ ಸಾರ್ವಜನಿಕರು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆದು ಅದು ಹಿಂಸಾಚಾರಕ್ಕೆ ತಿರುಗಿದೆ. ಸಾರ್ವಜನಿಕರ ರಾಜಪ್ರಭುತ್ವ ಹಾಗೂ ಹಿಂದೂ ರಾಷ್ಟ್ರದ ಕೂಗಿಗೆ ಅಲ್ಲಿನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಪಕ್ಷ ಹಾಗೂ ಇತರ ಸಂಘಟನೆಗಳು ಬೆಂಬಲ ನೀಡಿವೆ.
ನೇಪಾಳದಲ್ಲಿ ಮತ್ತೆ ರಾಜಪ್ರಭುತ್ವ ಬರಲಿ ಎಂದು ಆಗ್ರಹಿಸಿ ಸಾವಿರಾರು ಪ್ರತಿಭಟನಾಕಾರರು ಸೇರಿ ‘ರಾಜ ಮತ್ತೆ ಬರಲಿ’ ನಮ್ಮ ದೇಶವನ್ನು ಕಾಪಾಡಲಿ, ‘ಭ್ರಷ್ಟಾಚಾರಿ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಹಿಮಾಲಯದ ಮಡಿಲಿನಲ್ಲಿರುವ ನೇಪಾಳ 2008ರವರೆಗೆ ರಾಜಪ್ರಭುತ್ವದಿಂದ ಕೂಡಿದ ಹಿಂದೂ ರಾಷ್ಟ್ರವಾಗಿಯೇ ಇತ್ತು. ಆದರೆ ದಶಕಗಳ ಕಾಲ ನಡೆದ ನಾಗರಿಕ ಅಶಾಂತಿಯಲ್ಲಿ 16000 ಜನ ಪ್ರಾಣ ಕಳೆದುಕೊಂಡರು. ಇದರ ವಿರುದ್ಧ ಕಮ್ಯಿನಿಸ್ಟರ ನೇತೃತ್ವದಲ್ಲಿ ನಡೆದ ಜನಾಂದೋಲನದಿಂದಾಗಿ 2008ರಲ್ಲಿ 240 ವರ್ಷಗಳ ಹಿಂದೂ ರಾಷ್ಟ್ರವೂ ಕೊನೆಗೊಂಡಿತು. ಆಗ ಗಣರಾಜ್ಯ ಒಕ್ಕೂಟ ವ್ಯವಸ್ಥೆ ನೇಪಾಳದಲ್ಲಿ ಅಸ್ತಿತ್ವಕ್ಕೆ ಬಂದಿತು. ಕಮ್ಯುನಿಸ್ಟರು ಆಡಳಿತಕ್ಕೆ ಬಂದರು. ನೇಪಾಳವನ್ನು ಜಾತ್ಯಾತೀತ ದೇಶ ಎಂದು ಘೋಷಣೆ ಮಾಡಲಾಯಿತು. ಇದೀಗ ಕಮ್ಯುನಿಸ್ಟ್ ಆಡಳಿತದಿಂದ ಅಲ್ಲಿನ ಜನರು ಬೇಸೆತ್ತಿದ್ದು, ರಾಜಕೀಯ ಅಸ್ಥಿರತೆ ಶುರುವಾಗಿದೆ. ದೇಶದ ಜನ ದಂಗೆ ಏಳುತ್ತಿದ್ದಾರೆ.
ಇದನ್ನೆಲ್ಲಾ ಗಮನಿಸುವಾಗ ನೇಪಾಳ ಮತ್ತೆ ಹಿಂದೂ ರಾಷ್ಟ್ರವಾಗುವತ್ತ ಹೊರಟಿದೆ ಎನ್ನಬಹುದು. ನೇಪಾಳದ ಕಮ್ಯುನಿಸ್ಟ್ ಸರಕಾರದ ಭ್ರಷ್ಟಾಚಾರ ಕೂಡ ಮುಗಿಲು ಮುಟ್ಟಿದ್ದು, ಇದೂ ಕೂಡ ಜನರು ಸರಕಾರದ ವಿರುದ್ಧ ದಂಗೆ ಏಳಲು ಪ್ರಮುಖ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.