ಬೆಂಗಳೂರು: ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಾದ ಕಾರ್ಯಕ್ರಮವು ಇಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿಧಾನಸೌಧದ ಕಚೇರಿಯಲ್ಲಿ ನಡೆಯಿತು.
ವಿಧಾನಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಅವರು ಒಂದು ದೇಶ ಒಂದು ಚುನಾವಣೆ ಇಂದಿನ ಅನಿವಾರ್ಯತೆ ಎಂದು ತಿಳಿಸಿದರು. ಈ ಕ್ರಮದಿಂದ ಚುನಾವಣೆಗೆ ಬೇಕಾದ ಅನಗತ್ಯ ಹಣಕಾಸಿನ ವೆಚ್ಚವನ್ನು ತಡೆಯಬಹುದು ಮತ್ತು ಮಾನವ ಸಂಪನ್ಮೂಲ, ಸರಕಾರಿ ಅಧಿಕಾರಿ, ಸಿಬ್ಬಂದಿಗಳ ಬಳಕೆಯ ವಿಚಾರದಲ್ಲೂ ಪ್ರಯೋಜನ ಲಭಿಸಲಿದೆ ಎಂದು ವಿವರಿಸಿದರು. ಇತರ ದೇಶದಲ್ಲೂ ಇಂಥ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದರು.
‘ಒಂದು ದೇಶ ಒಂದು ಚುನಾವಣೆ’ಯ ಮಹತ್ವ, ಖರ್ಚುವೆಚ್ಚ, ಇದರ ಪ್ರಯೋಜನ ಕುರಿತು ಕೆ.ಎಸ್.ನವೀನ್ ಅವರು ಬೆಳಕು ಚೆಲ್ಲಿದರು. ಇದೇವೇಳೆ ವಿಧಾನಪರಿಷತ್ತಿನ ಸದಸ್ಯರು ತಮಗೆ ಇರುವ ಸಂದೇಹಗಳನ್ನು ಪ್ರಶ್ನೆಗಳ ಮೂಲಕ ಪರಿಹರಿಸಿಕೊಂಡರು.
ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ಪ್ರಬುದ್ಧರು, ವಕೀಲರ ಜೊತೆಗೂಡಿ ಇದರ ಕುರಿತಾಗಿ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲೆಗಳು, ತಾಲ್ಲೂಕುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಾಗಾರ ಮತ್ತು ಸಂವಾದ ನಡೆಸುವ ಕುರಿತು ಇದೇವೇಳೆ ಚರ್ಚಿಸಲಾಯಿತು.
ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ್, ಹಿರಿಯ ಸದಸ್ಯ ಮತ್ತು ಮಾಜಿ ಸಚಿವ ಸಿ.ಟಿ.ರವಿ, ಪಕ್ಷದ ಸದಸ್ಯರು, ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.