ಬೆಂಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಅರಾಜಕತೆ ಪರಿಸ್ಥಿತಿ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರ ಮಗ ಬಸವೇಶ್ ರನ್ನು ಬಂಧಿಸಿಲ್ಲ. ಬೇರೆ ಯಾರೋ ಮೂವರನ್ನು ಬಂಧಿಸಿದ್ದಾಗಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ಈ ಥರ ಮಾತನಾಡಿದ್ದಾರಲ್ಲವೇ? ಸಚಿವರು ಮಾಧ್ಯಮಗಳು, ನಮ್ಮ ಮೇಲೆ ಹರಿಹಾಯುತ್ತಾರೆ. ಇವರು ಉಸ್ತುವಾರಿ ಸಚಿವರಾಗಿ ಆ ಮಹಿಳಾ ಅಧಿಕಾರಿಗೆ ಸಾಂತ್ವನ ಹೇಳಿದ್ದಾರಾ ಎಂದು ಪ್ರಶ್ನಿಸಿದರು. ಏನು ತಿನ್ನುತ್ತಿದ್ದಾರೆ ಇವರು? ನನಗೆ ಹೇಳಿದ್ದನ್ನು ಇವರು ತಿನ್ನುತ್ತಿದ್ದಾರಾ ಎಂದು ಕೇಳಿದರು.
ಆ ಕೇಸಿಗೆ ಏನೇನೋ ತಿರುವು ಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಟೀಕಿಸಿದರು. ಈ ಕಾಲದಲ್ಲಿ ಕಾಲ್ ರೆಕಾರ್ಡ್ ಪರಿಶೀಲಿಸಿದರೆ ಕರೆಯ ಎಲ್ಲ ವಿವರ ಲಭಿಸುತ್ತದೆ. ಅವರ ಅಕ್ಕ ತಂಗಿ, ಭದ್ರಾವತಿ ತಾಯಿ ಬಗ್ಗೆ ಹೀಗೆ ಹೇಳಿದ್ದರೆ ಏನಾಗುತ್ತಿತ್ತು? ಬೈದವನು ಬಸವ. ಆದರೆ, ಯಾರೋ ಮೂರು ಜನರನ್ನು ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ಫೋನ್ ಕೊಟ್ಟ ವ್ಯಕ್ತಿ ರಮೇಶನನ್ನು ಬಂಧಿಸಿದ್ದೀರಾ? ತಾವೇನು ತಿನ್ನುತ್ತ ಕೂತಿದ್ದೀರಿ ಎಂದು ಪ್ರಶ್ನೆ ಮಾಡಿದರು. ನನಗೆ ಹೇಳಿದ್ದನ್ನು ನೀವು ತಿನ್ನುತ್ತ ಕೂತಿದ್ದೀರಾ? ಉಸ್ತುವಾರಿ ಸಚಿವರ ಬಗೆಗಿನ ಭರವಸೆ ಹುಸಿ ಆಗುತ್ತಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.