ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೆಳಮನೆಯಲ್ಲಿ ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದ್ದಾರೆ.
ಚುನಾಯಿತ ಸದಸ್ಯರು ಘೋಷಣೆಗಳನ್ನು ಒಳಗೊಂಡಂತೆ ಪ್ರಮಾಣವಚನಕ್ಕೆ ಯಾವುದೇ ಘೋಷವಾಕ್ಯ ಸೇರಿಸುವುದನ್ನು ನಿರ್ಬಂಧಿಸಿದ್ದಾರೆ. ಇತ್ತೀಚಿನ ತಿದ್ದುಪಡಿಗಳ ಪ್ರಕಾರ, ‘ಸಭಾಧ್ಯಕ್ಷರ ನಿರ್ದೇಶನ’ಗಳಿಗೆ ಹೊಸ ಷರತ್ತು ಸೇರಿಸಲಾಗಿದೆ. ಕೆಳಮನೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಯಂತ್ರಿಸಲು ಹೊಸ ಷರತ್ತು ಸೇರಿಸಲಾಯಿತು. ಈ ವಿಷಯಗಳ ನಿಯಮಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸದ ಕಾರಣಕ್ಕೆ ಷರತ್ತು ಸೇರಿಸಲಾಗಿದೆ.
ಭಾರತದ ಸಂವಿಧಾನದ ಮೂರನೇ ಶೆಡ್ಯೂಲ್ನಲ್ಲಿ ನಿಗದಿಪಡಿಸಿದ ನಮೂನೆಗೆ ಅನುಗುಣವಾಗಿ ಒಬ್ಬ ಸದಸ್ಯನು ಪ್ರಮಾಣ ಅಥವಾ ದೃಢೀಕರಣವನ್ನು ಮಾಡಬೇಕು ಮತ್ತು ಈ ವೇಳೆ ಯಾವುದೇ ಪದ ಅಥವಾ ಅಭಿವ್ಯಕ್ತಿಯನ್ನು ಬಳಸಬಾರದು ಎಂದು ಹೊಸ ಷರತ್ತು ಹೇಳುತ್ತದೆ. ಪ್ರಮಾಣ ಅಥವಾ ದೃಢೀಕರಣಕ್ಕೆ ಮೊದಲು ಮತ್ತು ನಂತರ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಈ ಬಾರಿ ಲೋಕಸಭೆಯ ಹಲವು ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕೆಲವು ಘೋಷಣೆಗಳನ್ನು ಕೂಗಿ ದೊಡ್ಡ ಮಟ್ಟದಲ್ಲಿ ವಿವಾದ ಎಬ್ಬಿಸಿದ ನಂತರ ಸ್ಪೀಕರ್ ಅವರು ಈ ಷರತ್ತುಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.