ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಕಾನೂನನ್ನು ಎತ್ತಿಹಿಡಿಯದ ಕೇರಳ ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ರಾಜ್ಯ ರಾಜಧಾನಿಯಿಂದ ಸುಮಾರು 60 ಕಿಮೀ ದೂರದಲ್ಲಿರುವ ನಿಲಮೇಲ್ನಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಆರಿಫ್ ಖಾನ್ ಅವರು ತಿರುವನಂತಪುರಂನಿಂದ ಸುಮಾರು 70 ಕಿ.ಮೀ ದೂರದ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಅವರ ವಾಹನ ನಿಲಮೆಲ್ ಅನ್ನು ತಲುಪಿದಾಗ ಸುಮಾರು 12ಕ್ಕೂ ಅಧಿಕ ಎಸ್ಎಫ್ಐ ವಿದ್ಯಾರ್ಥಿಗಳು ದಾರಿಬದಿಯಲ್ಲಿ ಕಪ್ಪು ಬಾವುಟಗಳನ್ನು ಬೀಸುತ್ತಾ, ಕೂಗಾಡಿದ್ದಾರೆ. ಇದನ್ನು ನೋಡಿದ ಖಾನ್ ತಮ್ಮ ಕಾರನ್ನು ನಿಲ್ಲಿಸಿ ಪ್ರತಿಭಟನಾಕಾರರ ಬಳಿಗೆ ತೆರಳಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅವರು ಪಕ್ಕದ ಚಹಾ ಅಂಗಡಿಯಿಂದ ಕುರ್ಚಿಯನ್ನು ತಂದು ಅದರಲ್ಲಿ ಕುಳಿತು ತಮ್ಮ ಕಾರ್ಯದರ್ಶಿ ಮೋಹನ್ ಅವರ ಬಳಿ ತಕ್ಷಣ ಪೊಲೀಸ್ ಆಯುಕ್ತರನ್ನು ಕರೆಯುವಂತೆ ಹೇಳಿದರು.
“ಪೊಲೀಸ್ ಆಯುಕ್ತರನ್ನು ಕರೆಯಿರಿ. ಇಲ್ಲದಿದ್ದರೆ, ಪ್ರಧಾನಿಗೆ ಕರೆ ಮಾಡಿ. ಇದಕ್ಕೆಲ್ಲಾ ಪೊಲೀಸರು ಕಾರಣ, ನಾನು ಇಲ್ಲಿಂದ ಹೋಗುವುದಿಲ್ಲ. ಪೊಲೀಸರು ಪ್ರತಿಭಟನಾಕಾರರಿಗೆ ರಕ್ಷಣೆ ನೀಡುತ್ತಿದ್ದಾರೆ. ಪೊಲೀಸರು ಕಾನೂನು ಉಲ್ಲಂಘಿಸುತ್ತಿದ್ದಾರೆ” ಎಂದು ಖಾನ್ ತಮ್ಮ ಸುತ್ತಲೂ ನೆರೆದಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನಾನಿರತ ಎಸ್ಎಫ್ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸದ ಕಾರಣ ಖಾನ್ ಬೇಸರಗೊಂಡರು ಎನ್ನಲಾಗಿದೆ. ಮುಖ್ಯಮಂತ್ರಿಗಳು ಹಾದು ಹೋಗುವಾಗ ಇಂತಹ ಕೃತ್ಯ ನಡೆದರೆ ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸುತ್ತಾರೆಯೇ ಇಲ್ಲವೇ? ಎಂದು ಖಾನ್ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳದ ಹೊರತು ಕದಲುವುದಿಲ್ಲ ಎಂದು ಖಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
#WATCH | "I will not leave from here. Police is giving them protection, " says Governor Arif Mohammed Khan after SFI activists held a protest against him in Kollam. Police present on the spot https://t.co/nQHF9PWqpr pic.twitter.com/RHFFBRCh9s
— ANI (@ANI) January 27, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.