ನವದೆಹಲಿ: ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ G20 ನಾಯಕರ ಶೃಂಗಸಭೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಧುಬನಿ ಚಿತ್ರ ಕಲಾವಿದೆ ಶಾಂತಿ ದೇವಿ ಅವರು ತಮ್ಮ ಮೇರುಕೃತಿಯನ್ನು ಪ್ರಸ್ತುತಪಡಿಸಿದರು. ಭಾರತದ ಚಂದ್ರಯಾನ್-3 ಮಿಷನ್ನ ವಿಜಯವನ್ನು ಸಂಭ್ರಮಿಸುವ ಬಗೆಗಿನ ಚಿತ್ರಕಲೆ ಇದಾಗಿದೆ.
ಈ ಸೊಗಸಾದ ಕಲಾಕೃತಿಯನ್ನು ನವದೆಹಲಿಯ ಪ್ರಗತಿ ಮೈದಾನದ ಪ್ರತಿಷ್ಠಿತ ಭಾರತ ಮಂಟಪದಲ್ಲಿರುವ ಕಲೆ ಮತ್ತು ಕರಕುಶಲ ಪ್ರದರ್ಶನ ಪೆವಿಲಿಯನ್ನಲ್ಲಿ ಪ್ರದರ್ಶಿಸಲಾಗಿದೆ.
ತನ್ನ ಕಲಾಕೃತಿಯ ಹಿಂದಿನ ಕಲ್ಪನೆಯನ್ನು ವಿವರಿಸಿದ ಶಾಂತಿ ದೇವಿ, “ಭಾರತ ಸರ್ಕಾರವು ನಮ್ಮನ್ನು ಜಿ 20 ಗೆ ಆಹ್ವಾನಿಸಿದೆ. ನಾನು ಮೊದಲು ಪತ್ರಿಕೆಯಲ್ಲಿ ಚಂದ್ರಯಾನವನ್ನು ನೋಡಿದೆ, ಹಾಗಾಗಿ ಅದು ನನ್ನ ಮನಸ್ಸಿಗೆ ಬಂದಿತು. ಹೀಗಾಗಿ ಈ ಬಾರಿ ಅದರ ವರ್ಣಚಿತ್ರವನ್ನು ಏಕೆ ಮಾಡಬಾರದು ಎಂದು ನಾನು ಯೋಚಿಸಿದೆ. ನಾನು ತುಂಬಾ ಬಯಸಿ ಇದನ್ನು ರಚಿಸಿದ್ದೇನೆ. ಇಲ್ಲಿರುವುದಕ್ಕೆ ಸಂತೋಷವಾಗುತ್ತಿದೆ” ಎಂದಿದ್ದಾರೆ.
ಜಿ-20 ಶೃಂಗಸಭೆಯಲ್ಲಿ ಕುಶಲಕರ್ಮಿಗಳ ಕಲೆಗಳನ್ನು ಕೂಡ ಪ್ರದರ್ಶಿಸಲಾಗಿದೆ. ಮಹಿಳೆಯರ ಚಿತ್ರಕಲಾ ಪ್ರದರ್ಶನವೂ ಮುಖ್ಯ ಆಕರ್ಷಣೆಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.