ನವದೆಹಲಿ: ಜನರನ್ನು ದಾರಿತಪ್ಪಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ ಎಂದು ಇಂದು ಲೋಕಸಭೆಯಲ್ಲಿ ಆರೋಪಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ, 30 ವರ್ಷಗಳಿಂದ ದೇಶ ವಂಶಾಡಳಿತ, ಭ್ರಷ್ಟಾಚಾರ, ಜಾತೀಯತೆಯಿಂದ ನರಳುತ್ತಿದ್ದು, ಪ್ರಧಾನಿ ಮೋದಿ ಇದನ್ನೆಲ್ಲ ಮುಗಿಸಿ ದೇಶಕ್ಕೆ ಸಾಧನೆಯ ರಾಜಕಾರಣ ನೀಡಿದ್ದಾರೆ ಎಂದರು.
ಅವರು ಇಂದು ಸಂಸತ್ತಿನಲ್ಲಿ ಹಿಂಸಾಚಾರ ಪೀಡಿತ ಮಣಿಪುರವನ್ನು ಕೇಂದ್ರವಾಗಿಟ್ಟುಕೊಂಡ ಚರ್ಚೆಯಲ್ಲಿ ಪ್ರತಿಕ್ರಿಯಿಸುತ್ತಾ, ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವು ರಾಜಕೀಯ ಪ್ರೇರಿತ ಆಗಿರುವುದರಿಂದ ಸರ್ಕಾರದ ಸಾಧನೆಗಳ ಮೇಲೆ ಕೇಂದ್ರೀಕರಿಸಿ ನಾನು ಮಾತನಾಡಬೇಕಾಗಿದೆ ಎಂದರು.
ರೈತರು, ಮಹಿಳೆಯರು ಮತ್ತು ಬಡವರಿಗಾಗಿ ಸರ್ಕಾರದ ಕಲ್ಯಾಣ ಕಾರ್ಯಗಳ ಮೇಲೆ ಕೇಂದ್ರೀಕರಿಸಿ ಮಾತನಾಡಿದ ಅವರು, ಕೋವಿಡ್ ಮತ್ತು ಡ್ರಗ್ಸ್ ಹಾವಳಿ ವಿರುದ್ಧದ ಹೋರಾಟದ ವಿಷಯದಲ್ಲಿ ಕೇಂದ್ರದ ರಿಪೋರ್ಟ್ ಕಾರ್ಡ್ ಅನ್ನು ಸಹ ಪ್ರಸ್ತುತಪಡಿಸಿದರು.
“ಸ್ವಾತಂತ್ರ್ಯದ ನಂತರ, ಭಾರತವು ಸಂಪೂರ್ಣವಾಗಿ ನಂಬುವ ನಾಯಕರಿದ್ದರೆ ಅದು ಪ್ರಧಾನಿ ಮೋದಿ. ಈ ಅವಿಶ್ವಾಸ ನಿರ್ಣಯವು ಜನರ ಆಯ್ಕೆಯನ್ನು ಪ್ರತಿಬಿಂಬಿಸುವುದಿಲ್ಲ, ಜನರ ಆಯ್ಕೆಯನ್ನು ಅಡ್ಡಿಪಡಿಸಲು ಮಾತ್ರ ತರಲಾಗಿದೆ” ಎಂದು ಅವರು ಹೇಳಿದರು.
ಸದನದಲ್ಲಿ 13 ಬಾರಿ ಲಾಂಚ್ ಆಗಿ 13 ಬಾರಿ ವಿಫಲವಾದ ನಾಯಕರೊಬ್ಬರು ಈ ಸದನದಲ್ಲಿದ್ದಾರೆ ಎಂದು ಅವರು ರಾಹುಲ್ ಗಾಂಧಿಯ ಹೆಸರನ್ನು ಹೇಳದೆಯೇ ಕುಟುಕಿದರು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.