ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ದೆಹಲಿಯಿಂದ ವರ್ಚುವಲ್ ಮೋಡ್ ಮೂಲಕ ವಿಶ್ವದ ಅತಿ ಎತ್ತರದ 108 ಅಡಿ ಎತ್ತರ ಭಗವಾನ್ ರಾಮನ ಪಂಚಲೋಹ ಪ್ರತಿಮೆ ಸ್ಥಾಪನೆ ಮಾಡುವ ರಾಮ ಮಂದಿರ ಯೋಜನೆಗೆ ಅಡಿಪಾಯ ಹಾಕಿದರು.
ಮಂತ್ರಾಲಯವು “ವಿಶ್ವದ ಅತಿ ಎತ್ತರದ” 108 ಅಡಿ ಭಗವಾನ್ ರಾಮನ ಪ್ರತಿಮೆಯ ಭವ್ಯತೆಗೆ ಸಾಕ್ಷಿಯಾಗಲು ಸಿದ್ಧವಾಗಿದ್ದು, ಇದು ಮುಂದಿನ ಒಂದೆರಡು ವರ್ಷಗಳಲ್ಲಿ ಸಿದ್ಧವಾಗಲಿದೆ.
300 ಕೋಟಿ ವೆಚ್ಚದ ಈ ಮಹತ್ವದ ಯೋಜನೆಯನ್ನು ಜೈ ಶ್ರೀ ರಾಮ್ ಫೌಂಡೇಶನ್ ಕೈಗೆತ್ತಿಕೊಳ್ಳುತ್ತಿದೆ. ಗುಜರಾತ್ನಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯ ಕೆಲಸ ಮಾಡಿ ಹೆಸರುವಾಸಿಯಾದ ಖ್ಯಾತ ಶಿಲ್ಪಿ ರಾಮ್ ವಂಜಿ ಸುತಾರ್ ಅವರು ಭವ್ಯವಾದ ಭಗವಾನ್ ರಾಮನ ಪ್ರತಿಮೆಯನ್ನು ವಿನ್ಯಾಸಗೊಳಿಸುತ್ತಿದ್ದಾರೆ.
ಪೂಜ್ಯ ಮಂತ್ರಾಲಯ ಶ್ರೀ ಮಠದಿಂದ ಸರಿಸುಮಾರು 1 ಕಿಮೀ ದೂರದಲ್ಲಿ 10 ಎಕರೆ ವಿಶಾಲವಾದ ಜಾಗದಲ್ಲಿ ರಾಮಮಂದಿರವು ಪ್ರತಿಮೆಯ ಮುಂದೆ ಬರಲಿದೆ.
ಈ ಉಪಕ್ರಮವು ಕೇವಲ ಮಂತ್ರಾಲಯದಲ್ಲಿರುವ ಶ್ರೀರಾಮನ ಪ್ರತಿಮೆ ಮತ್ತು ದೇವಾಲಯಕ್ಕೆ ಸೀಮಿತವಾಗಿಲ್ಲ. ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ, ಕಾಶಿಯ ವಿಶ್ವನಾಥ ದೇವಾಲಯ, ಸಿಂಹಾಚಲಂನ ನರಸಿಂಹಸ್ವಾಮಿ ದೇವಾಲಯ, ಉತ್ತರಾಖಂಡದ ಬದರಿನಾಥ ದೇವಾಲಯ, ಉತ್ತರಾಖಂಡದ ಬದರಿನಾಥ ದೇವಾಲಯ, ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯ, ಕರ್ನಾಟಕದ ಬಸರ ಜ್ಞಾನ ಸರಸ್ವತಿ ದೇಗುಲ, ಚೆಲುವ ನಾರಾಯಣ ಸ್ವಾಮಿ ದೇವಾಲಯ, ತಮಿಳುನಾಡಿನ ಮೂಶನಂ ವರಹಸ್ವಾಮಿ ದೇಗುಲ ಮತ್ತು ಮಹಾರಾಷ್ಟ್ರದ ವಿಠ್ಠಲ ರುಕ್ಮಿಣಿ ದೇವಸ್ಥಾನ ಮುಂತಾದ ದೇಗುಲಗಳಿಂದ ಪ್ರೇರಿತವಾಗಿ ರಾಮಮಂದಿರದ ಆವರಣದಲ್ಲಿ ಸಣ್ಣ ದೇವಾಲಯಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗಳು ಇದರಡಿ ನಡೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.