ನವದೆಹಲಿ: ಅಲಹಾಬಾದ್ ಹೈಕೋರ್ಟ್ ಬುಧವಾರ ರಾಮಾಯಣದ ಪಾತ್ರಗಳನ್ನು ಅಸಮಂಜಸವಾಗಿ ಚಿತ್ರಿಸಿದ “ಆದಿಪುರುಷ್” ಸಿನಿಮಾ ತಯಾರಕರನ್ನು ತರಾಟೆಗೆ ತೆಗೆದುಕೊಂಡಿದೆ, ಕುರಾನ್ ಅನ್ನು ಇದೇ ರೀತಿಯಲ್ಲಿ ಚಿತ್ರಿಸಿದ್ದರೆ ದೇಶದಲ್ಲಿ ಕಾನೂನು-ಸುವ್ಯವಸ್ಥೆ ಯಾವ ರೀತಿ ಇರುತ್ತಿತ್ತು ಎಂದು ಕಲ್ಪಿಸಿಕೊಳ್ಳಿ ಎಂದು ಹೇಳಿದೆ.
ಸಿನಿಮಾವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಲಕ್ನೋ ಪೀಠವು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ರಾಮಾಯಣ, ಕುರಾನ್ ಅಥವಾ ಬೈಬಲ್ ಆಧಾರಿತ ಸಿನಿಮಾಗಳನ್ನು ಏಕೆ ನಿರ್ಮಿಸಬೇಕು ಎಂದಿದೆ.
“ಕುರಾನ್ ಮೇಲೆ ಸಣ್ಣ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ ಎಂದು ಭಾವಿಸೋಣ, ಯಾವ ರೀತಿಯ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗಬಹುದು ಎಂದು ನೀವು ಯೋಚಿಸಬಹುದೇ? ಆದರೆ ಹಿಂದೂಗಳ ಸಹಿಷ್ಣುತೆಯಿಂದಾಗಿ, ಚಲನಚಿತ್ರ ನಿರ್ಮಾಪಕರ ಈ ಪ್ರಮಾದ ಎಸಗುತ್ತಾರೆ ಆದರೂ ಸಮಸ್ಯೆಗಳು ಉದ್ಭವಿಸುವುದಿಲ್ಲ” ಎಂದು ಹೇಳಿದೆ.
“ಸಿನಿಮಾವೊಂದರಲ್ಲಿ ಶಿವನು ತನ್ನ ತ್ರಿಶೂಲದೊಂದಿಗೆ ಓಡುತ್ತಿರುವಂತೆ ತೋರಿಸಲಾಗಿತ್ತು. ಈಗ ರಾಮಾಯಣದ ಶ್ರೀರಾಮ ಮತ್ತು ಇತರ ಪಾತ್ರಗಳನ್ನು ಅತ್ಯಂತ ನಾಚಿಕೆಗೇಡಿನ ರೀತಿಯಲ್ಲಿ ತೋರಿಸಲಾಗಿದೆ, ಇದು ನಿಲ್ಲಬಾರದೇ? ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.