ಢಾಕಾ: ಬಾಂಗ್ಲಾದೇಶದ ಅತಿ ದೊಡ್ಡ ಅಲ್ಪಸಂಖ್ಯಾತರಾದ ಹಿಂದೂಗಳು ಭದ್ರತೆಯ ಕೊರತೆ ಮತ್ತು ನಾಗರಿಕ ಹಕ್ಕುಗಳ ನಿರಾಕರಣೆಯ ಕಾರಣದಿಂದ ದೇಶವನ್ನು ತೊರೆಯುತ್ತಿದ್ದಾರೆ ಎಂದು ಬಾಂಗ್ಲಾದ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಆರೋಪಿಸಿದೆ.
ಹಿಂದೂ ಬೌದ್ಧ ಕ್ರಿಶ್ಚಿಯನ್ ಕಲ್ಯಾಣ್ ಫ್ರಂಟ್ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎನ್ಪಿ ಸ್ಥಾಯಿ ಸಮಿತಿ ಸದಸ್ಯ ಗಯೇಶ್ವರ್ ಚಂದ್ರ ರಾಯ್, 1964 ರ ಗಲಭೆ ನಂತರ ಹಿಂದೂಗಳು ಗುಂಪು ಗುಂಪಾಗಿ ಬಾಂಗ್ಲಾದೇಶವನ್ನು ತೊರೆದಂತೆ ಈಗ ಅವರು ತೊರೆಯುತ್ತಿಲ್ಲ, ಆದರೆ ಅವರು ಸದ್ದಿಲ್ಲದಂತೆ ಬಾಂಗ್ಲಾ ತೊರೆದು ಹೋಗುತ್ತಿದ್ದಾರೆ ಎಂದು ಹೇಳಿದರು.
ದೈನಂದಿನ ಆಧಾರದ ಮೇಲೆ 1960 ರ ದಶಕದಲ್ಲಿ 37 ಪ್ರತಿಶತದಷ್ಟಿದ್ದ ದೇಶದಲ್ಲಿ ಹಿಂದೂ ಜನಸಂಖ್ಯೆಯ ಕುಸಿತದಲ್ಲಿದೆ. ಈಗ ಅದು ಒಟ್ಟು ಜನಸಂಖ್ಯೆಯ 10 ಪ್ರತಿಶತಕ್ಕಿಂತ ಕಡಿಮೆಯಾಗಿದೆ ಎಂದಿದ್ದಾರೆ.
ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳು ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಡಳಿತವು ಗಮನ ಹರಿಸುತ್ತಿಲ್ಲ ಎಂದು ಬಿಎನ್ಪಿ ನಾಯಕ ಗಯೇಶ್ವರ್ ಚಂದ್ರ ರಾಯ್ ಆರೋಪಿಸಿದ್ದಾರೆ. ನ್ಯಾಯಾಲಯ, ಆಡಳಿತ ಸೇರಿದಂತೆ ಎಲ್ಲೆಡೆ ಹಿಂದೂಗಳನ್ನು ನಿರ್ಲಕ್ಷಿಸಲಾಗಿದೆ. ದೇಶದ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವಲ್ಲಿ ರಾಜ್ಯ ವಿಫಲವಾಗಿದೆ ಎಂದು ಟೀಕಿಸಿದರು.
ಈ ವಾರದ ಆರಂಭದಲ್ಲಿ ಅಧ್ಯಕ್ಷ ಜೋ ಬಿಡೆನ್ಗೆ ಕಳುಹಿಸಲಾದ ಆರು ಯುಎಸ್ ಕಾಂಗ್ರೆಸ್ನ ಪತ್ರವನ್ನು ಉಲ್ಲೇಖಿಸಿದ ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಕಲ್ಯಾಣ್ ಫ್ರಂಟ್ ಅಧ್ಯಕ್ಷ ಬಿಜೋನ್ ಕಾಂತಿ ಸರ್ಕರ್, ಅಲ್ಪಸಂಖ್ಯಾತ ಸಮುದಾಯದ ಪರಿಸ್ಥಿತಿಯು ಪತ್ರದಲ್ಲಿ ಚಿತ್ರಿಸುವುದಕ್ಕಿಂತಲೂ ಹೆಚ್ಚು ಶೋಚನೀಯವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.