ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೊತೆ ವರ್ಚುವಲ್ ಆಗಿ ಸಂವಾದ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಕಾರ್ಯಕರ್ತರನ್ನು ಪ್ರೇರೇಪಿಸಿದ್ದಾರೆ.
“ಕರ್ನಾಟಕದ ಸಮೃದ್ಧ ಪರಂಪರೆಯ ಪ್ರತಿನಿಧಿಗಳಾಗಿ ಮತ್ತು ರಾಷ್ಟ್ರ ಭಕ್ತಿಯಿಂದ ಪ್ರೇರೇಪಿತರಾದ ಬಿಜೆಪಿಯ ಕಾರ್ಯಕರ್ತರು ದುಪ್ಪಟ್ಟು ಗೌರವ ಪಡೆದುಕೊಂಡಿದ್ದಾರೆ. ಹೀಗಾಗಿ ನಿಮ್ಮೆಲ್ಲರ ಮೇಲೆ ಹೊಣೆಗಾರಿಕೆಯು ದುಪ್ಪಟ್ಟಾಗಿದೆ. ಪ್ರತಿ ಬೂತ್ ನಲ್ಲಿ ನಿಮ್ಮ ಮೂಲಕ ನಡೆದ ಪ್ರಯತ್ನಗಳು ಬಿಜೆಪಿಯನ್ನು ಕರ್ನಾಟಕದಲ್ಲಿ ದಾಖಲೆಯ ಸ್ಥಾನಗಳಿಂದ ಗೆಲ್ಲಿಸಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಬೂತ್ ಜಯಗಳಿಸಿದಾಗ ಚುನಾವಣೆಯಲ್ಲಿ ವಿಜಯ ಖಚಿತವಾಗಿ ದೊರೆಯುತ್ತದೆ” ಎಂದಿದ್ದಾರೆ.
“ಬೂತ್ನಲ್ಲಿ ವಿಜಯ ತಂದುಕೊಡುವ ನಿಮ್ಮ ಭಾವನೆಯೇ ಪಕ್ಷವನ್ನು ಚುನಾವಣೆ ಗೆಲ್ಲುವಂತೆ ಮಾಡುತ್ತದೆ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಎರಡು ದಿನಗಳ ಬಳಿಕ ನಾನು ಕೂಡ ಎಲ್ಲಾ ಕಾರ್ಯಕರ್ತರ ನಡುವೆ ಬರಲಿದ್ದೇನೆ. ಕರ್ನಾಟಕದ ಜನತೆಯನ್ನು ಭೇಟಿಯಾಗಲಿದ್ದೇನೆ ಮತ್ತು ಅವರ ಆಶೀರ್ವಾದವನ್ನು ಪಡೆಯಲಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನಾನು ಸರ್ಕಾರಿ ಕಾರ್ಯಕ್ರಮದ ಸಲುವಾಗಿ ಕರ್ನಾಟಕದ ಹಲವಡೆ ಹೋದಾಗ ಅಲ್ಲಿನ ಜನರು ನಮ್ಮೆಲ್ಲರ ಮೇಲೆ ಭರಪೂರ ಆಶೀರ್ವಾದ ಮಾಡಿದರು. ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರ ಮೇಲೂ ಅಪಾರ ಸ್ನೇಹವನ್ನು ತೋರ್ಪಡಿಸಿದರು. ಸಣ್ಣ ಸಣ್ಣ ಕಾರ್ಯಕರ್ತರ ಮೇಲೆ ಸ್ನೇಹ ತೋರಿಸುತ್ತಿದ್ದಾರೆ. ಇದು ಕರ್ನಾಟಕ ಜನತೆಗೆ ಬಿಜೆಪಿ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ” ಎಂದಿದ್ದಾರೆ.
ಜಗತ್ತಿನ ಹಲವು ದೇಶಗಳಲ್ಲಿ ಅರ್ಥ ವ್ಯವಸ್ಥೆ ಕುಸಿದು ಹೋಗಿದೆ ಆದರೆ ನಾವು ಹೇಗೆ ನಮ್ಮ ಆರ್ಥಿಕತೆಯನ್ನು ಬಲಿಷ್ಠ ಗೊಳಿಸಿದ್ದೇವೆ, ಜಗತ್ತಿನ ಹಲವು ದೇಶಗಳು ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ ವಿಫಲವಾದವು ಆದರೆ ಭಾರತ ಬಲಿಷ್ಠವಾಗಿ ಹೋರಾಡಿತು. ಇಂದು ಭಾರತ ಬಡತನದ ವಿರುದ್ಧ ಹೋರಾಡುತ್ತಿದೆ, ಮೂಲಸೌಕರ್ಯಗಳ ಮೇಲೆ ದಾಖಲೆಯ ಹೂಡಿಕೆ ಮಾಡುತ್ತಿದೆ, ರೈತರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕಿಸಾನ್ ಸಮ್ಮಾನ್ ನಿಧಿ ಮಾಧ್ಯಮದ ಮೂಲಕ ವರ್ಗಾಯಿಸಿದೆ. ತಲುಪುವಿಕೆ ವಿಷಯದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂದಿದ್ದಾರೆ.
ಭಾಷೆ, ಸಾಹಿತ್ಯ, ಸಂಸ್ಕೃತಿಯ ಗೌರವಶಾಲಿ ಪರಂಪರೆಯಲ್ಲಿ ಕರ್ನಾಟಕ ಸಾಕಷ್ಟು ಸಮೃದ್ಧವಾಗಿದೆ. ಆಧ್ಯಾತ್ಮಿಕತೆಯಲ್ಲಿ ಕರ್ನಾಟಕಕ್ಕೆ ಎದುರಾಳಿಯೇ ಇಲ್ಲ. ಇಲ್ಲಿ ಆಧ್ಯಾತ್ಮಿಕತೆ ಜನತೆಯನ್ನು ಒಂದುಗೂಡಿಸುತ್ತದೆ. ಸಾಮಾಜಿಕ ಜಾಗರೂಕತೆಯತೆಯತ್ತ ಮುನ್ನಡೆಯಲು ಪ್ರೇರೇಪಿಸುತ್ತದೆ. ಕನಕದಾಸರ ಭಕ್ತಿ, ಶಿವಶರಣರು ವಚನವಿರಲಿ ಕರ್ನಾಟಕದ ಜನತೆ ಭಕ್ತಿಯ ಶಕ್ತಿ ಉಪಯೋಗವನ್ನು ಸಮಾಜದ ನಿರ್ಮಾಣಕ್ಕಾಗಿ ಬಳಸಿದರು, ಭವಿಷ್ಯದ ನಿರ್ಮಾಣಕ್ಕೆ ಬಳಸಿದರು. ಕರ್ನಾಟಕದ ಜನರ ಸಮಯದೊಂದಿಗೆ ಮತ್ತು ಕೆಲವೊಮ್ಮೆ ಸಮಯಕ್ಕಿಂತಲೂ ಮುಂಚಿತವಾಗಿ ಸಾಗುತ್ತಾರೆ. ಆಧುನಿಕತೆಯೊಂದಿಗೆ ಸಾಗುತ್ತಲೇ ತಮ್ಮ ಸಾಹಿತ್ಯ, ಭಾಷೆಯೊಂದಿಗೆ ಬೆಸೆದಿದ್ದಾರೆ. ಇಲ್ಲಿನ ಯುವಕರು ಕೋಡಿಂಗ್ ಕೂಡ ಮಾಡುತ್ತಾರೆ ಕುವೆಂಪು ಅವರ ಕವಿತೆಯನ್ನೂ ಓದುತ್ತಾರೆ. ಇಂದಿಗೂ ಇಲ್ಲಿನ ಯುವಕರಲ್ಲಿ ಕರ್ನಾಟಕದ ಸಾಹಿತ್ಯ ಜೀವಂತವಾಗಿದೆ. ಕರ್ನಾಟಕ ತನ್ನ ಐತಿಹಾಸಿಕ ಪರಂಪರೆಯ ಬಗ್ಗೆ ಜಾಗರೂಕವಾಗಿದೆ ಮತ್ತು ಭವಿಷ್ಯದ ಭಾರತ ನಿರ್ಮಾಣಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.