ನವದೆಹಲಿ: ಸುರಕ್ಷಿತ ಗಡಿಗಳು ಮತ್ತು ಸ್ವಾವಲಂಬನೆಯ ಮೂಲಕ ಸದೃಢ ಆರ್ಥಿಕತೆ ಮತ್ತು ಜಾಗತಿಕ ಘನತೆಯನ್ನು ಸಾಧಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ ಎಂದು ಇಂದು ನವದೆಹಲಿಯಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ‘ರೈಸಿಂಗ್ ಇಂಡಿಯಾ ಕಾನ್ಕ್ಲೇವ್’ ಅನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದರು.
ಎಲ್ಲಾ ಕ್ಷೇತ್ರಗಳು, ವಿಶೇಷವಾಗಿ ರಕ್ಷಣೆಯು ಪರಿವರ್ತಕ ಬದಲಾವಣೆಗೆ ಸಾಕ್ಷಿಯಾಗಿದೆ . ಕಳೆದ ಕೆಲವು ವರ್ಷಗಳಲ್ಲಿ, ಭಾರತವು ವಿಶ್ವ ಭೂಪಟದಲ್ಲಿ ಗೌರವಾನ್ವಿತ ಸ್ಥಾನಕ್ಕೆ ಏರಿದೆ ಎಂದಿದ್ದಾರೆ.
7-8 ವರ್ಷಗಳ ಹಿಂದೆ 900 ಕೋಟಿ ರೂ.ಗಳಷ್ಟು ಇದ್ದ ಭಾರತದ ರಕ್ಷಣಾ ರಫ್ತುಈಗ ಗಗನಕ್ಕೇರಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 14,000 ಕೋಟಿ ರೂ. ತಲುಪಿದೆ. 2026 ರ ವೇಳೆಗೆ 40,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ರಫ್ತು ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಸ್ವಾವಲಂಬಿ ರಕ್ಷಣಾ ಉದ್ಯಮದ ಬೆಂಬಲದೊಂದಿಗೆ ಸುರಕ್ಷಿತ ಗಡಿಗಳು ಮತ್ತು ಯುದ್ಧ-ಸಿದ್ಧ ಸಶಸ್ತ್ರ ಪಡೆಗಳನ್ನು ಖಾತ್ರಿಪಡಿಸಿದ ಸರ್ಕಾರದ ದಿಟ್ಟ ವಿಧಾನ ಮತ್ತು ಅಚಲ ಸಂಕಲ್ಪವನ್ನು ಶ್ಲಾಘಿಸಿದ ಅವರು, ರಾಷ್ಟ್ರೀಯ ಭದ್ರತೆಯು ಸರ್ಕಾರದ ಪ್ರಮುಖ ಆದ್ಯತೆ ಮತ್ತು ಸ್ವಾವಲಂಬನೆಯನ್ನು ಸಾಧಿಸುವ ಏಕೈಕ ಮಾಧ್ಯಮ ಎಂದು ವ್ಯಾಖ್ಯಾನಿಸಿದರು. ರಕ್ಷಣೆಯಲ್ಲಿ ‘ಆತ್ಮನಿರ್ಭರತೆ’ಯನ್ನು ಸಾಧಿಸಲು ಅವಿರತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.