ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಾ ಮನ್ಸೂಖ್ ಮಾಂಡವಿಯಾ ಅವರು ಬುಧವಾರ ನವದೆಹಲಿಯಲ್ಲಿ ಜನೌಷಧಿ ರಥಕ್ಕೆ ಚಾಲನೆ ನೀಡಿದರು. ಜನೌಷಧಿ ಜನ ಚೇತನ ಅಭಿಯಾನದ ಆಚರಣೆಯ ಭಾಗವಾಗಿ ಜನೌಷಧಿ ರಥಕ್ಕೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಂಡವೀಯ, ಜನೌಷಧಿ ಸಪ್ತಾಹದಲ್ಲಿ ಜನರಲ್ಲಿ ಜನೌಷಧಿ ಕುರಿತು ಜಾಗೃತಿ ಮೂಡಿಸಲು ಗಮನಹರಿಸಲಾಗುವುದು. ಜನೌಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧಗಳು ಲಭ್ಯವಿವೆ ಎಂದರು.
ಈ ವರ್ಷದ ಅಂತ್ಯದೊಳಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜನೌಷಧಿ ಕೇಂದ್ರದಲ್ಲಿ ದೊರೆಯುವ ಔಷಧಿಗಳು ಬ್ರ್ಯಾಂಡೆಡ್ ಔಷಧಿಗಳ ಬೆಲೆಗಿಂತ ಶೇ.50 ರಿಂದ 90 ರಷ್ಟು ಕಡಿಮೆ ದರದಲ್ಲಿ ದೊರೆಯುತ್ತವೆ ಎಂದಿದ್ದಾರೆ.
2023 ರ ಮಾರ್ಚ್ 7 ರವರೆಗೆ ಜನೌಷಧಿ ಸಪ್ತಾಹವನ್ನು ಆಚರಿಸಲಾಗುತ್ತದೆ ಮತ್ತು ಮಾ.7 ಅನ್ನು ಔಷಧಿ ದಿವಸ್ ಆಗಿ ಆಚರಿಸಲಾಗುತ್ತದೆ. ಈ ಜನೌಷಧಿ ಸಪ್ತಾಹವು ಜನರಲ್ಲಿ ಜನೌಷಧಿಯ ಬಗ್ಗೆ ಜಾಗೃತಿಯನ್ನು ಕೇಂದ್ರೀಕರಿಸುತ್ತದೆ. ದೇಶಾದ್ಯಂತ ಜನೌಷಧಿ ಕೇಂದ್ರಗಳಲ್ಲಿ ಅಗ್ಗದ ಮತ್ತು ಗುಣಮಟ್ಟದ ಔಷಧಗಳು ಲಭ್ಯವಿದೆ ಮತ್ತು ಈ ಕೇಂದ್ರಗಳು ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಪ್ರತಿ ಪ್ಯಾಡ್ಗೆ ಕೇವಲ 1 ರೂಪಾಯಿಗೆ ನೀಡುತ್ತಿವೆ ಎಂದು ಹೇಳಿದರು.
ಜನೌಷಧಿ ಕೇಂದ್ರಗಳಿಂದ ಅತ್ಯಲ್ಪ ಬೆಲೆಗೆ ಪ್ಯಾಡ್ಗಳನ್ನು ಖರೀದಿಸಬಹುದಾಗಿರುವುದರಿಂದ ಮಹಿಳೆಯರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.