News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪದ್ಮ ಪ್ರಶಸ್ತಿ ಘೋಷಣೆ: ಸುಧಾಮೂರ್ತಿ, ಎಸ್.ಎಲ್‌ ಭೈರಪ್ಪಗೆ ಪದ್ಮಭೂಷಣ ಗೌರವ

ನವದೆಹಲಿ:  74 ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ಕೇಂದ್ರವು  ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಪ್ರಕಟಿಸಿದೆ. 106 ಪದ್ಮ ಪ್ರಶಸ್ತಿಗಳು ಘೋಷಣೆಯಾಗಿದೆ. ಇದರಲ್ಲಿ  6 ಪದ್ಮ ವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.

ಪದ್ಮವಿಭೂಷಣಕ್ಕೆ ಪಾತ್ರರಾದವರು:

ಮುಲಾಯಂ ಸಿಂಗ್ ಯಾದವ್ (ಮರಣೋತ್ತರ)
ಬಾಲಕೃಷ್ಣ ದೋಶಿ (ಮರಣೋತ್ತರ)
ಜಾಕಿರ್ ಹುಸೇನ್
ಎಸ್ ಎಂ ಕೃಷ್ಣ
ದಿಲೀಪ್ ಮಹಲನಾಬಿಸ್ (ಮರಣೋತ್ತರ)
ಶ್ರೀನಿವಾಸ್ ವರದನ್

ಪದ್ಮಭೂಷಣಕ್ಕೆ ಪಾತ್ರರಾದವರು:

ಎಸ್ ಎಲ್ ಭೈರಪ್ಪ
ಕುಮಾರ್ ಮಂಗಳಂ ಬಿರ್ಲಾ
ದೀಪಕ್ ಧರ್
ವಾಣಿ ಜೈರಾಮ್
ಸ್ವಾಮಿ ಚಿನ್ನ ಜೀಯರ್
ಸುಮನ್ ಕಲ್ಯಾಣಪುರ
ಕಪಿಲ್ ಕಪೂರ್
ಸುಧಾ ಮೂರ್ತಿ
ಕಮಲೇಶ್ ಡಿ ಪಟೇಲ್

91 ಮಂದಿ ಪದ್ಮಶ್ರೀ ಒಲಿದು ಬಂದಿದೆ. ಇದರಲ್ಲಿ ಕರ್ನಾಟಕದ ಖಾದರದ ವಲ್ಲಿ ದುಡೇಕುಲ, ಶ್ರೀಮತಿ ರಾಣಿ ಮಾಚಯ್ಯ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಶಾ ರಶೀದ್ ಅಹ್ಮದ್ ಖಾದ್ರಿ, ಎಸ್. ಸುಬ್ಬರಮಣ್ ಸೇರಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top