ಭುವನೇಶ್ವರ: ಒಡಿಶಾದಲ್ಲಿ ಕ್ರೈಸ್ಥ ಮತಕ್ಕೆ ಮತಾಂತರಗೊಂಡಿದ್ದ ಪರಿಶಿಷ್ಟ ಪಂಗಡದ 173 ಕುಟುಂಬಗಳ ಸುಮಾರು 500 ಸದಸ್ಯರು ಗುರುವಾರ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಈ ಕುಟುಂಬಗಳ ವಾಪಾಸ್ಸಾತಿಗೆ ಸುಂದರ್ಗಡ್ ಜಿಲ್ಲೆಯ ಜಮುರ್ಲಾ ಗ್ರಾಮದಲ್ಲಿ ವಿಶ್ವ ಕಲ್ಯಾಣ ಮಹಾಯಜ್ಞವನ್ನು ಆಯೋಜಿಸಲಾಗಿತ್ತು.
ಆರ್ಯ ಸಮಾಜ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸಹಯೋಗದಲ್ಲಿ ಧರ್ಮ ಜಾಗರಣ ಸಮನ್ವಯ ಇಲಾಖೆ ಒಡಿಶಾ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಶುದ್ಧೀಕರಣ ಕಾರ್ಯಕ್ರಮದ ನಂತರ ಅವರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಛತ್ತೀಸ್ಗಢ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಜುದೇವ್ ಅವರು ಛತ್ತೀಸ್ಗಢ, ಒಡಿಶಾ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬುಡಕಟ್ಟು ಸಮಾಜದ ಮತಾಂತರಗೊಂಡ ಜನರ ಮನೆಗೆ ತೆರಳಿ ಹಿಂದೂ ಧರ್ಮಕ್ಕೆ ಮರಳುವಂತೆ ಪ್ರಚಾರ ಮಾಡುತ್ತಿದ್ದಾರೆ.
ಅಖಿಲ ಭಾರತ ಘರ್ ವಾಪ್ಸಿ ಅಭಿಯಾನದ ಮುಖ್ಯಸ್ಥ ಜುದೇವ್ ಮಾತನಾಡಿ, ಜಮುರ್ಲಾದಲ್ಲಿ ಹಿಂದೂ ಧರ್ಮಕ್ಕೆ ಹಿಂದಿರುಗಿದ ಜನರು ಭಗವಾನ್ ಬಿರ್ಸಾ ಮುಂಡಾ ಅವರ ಸಮಾಜದಿಂದ ಬಂದವರು. ಇಲ್ಲಿ ಘರ್ ವಾಪ್ಸಿ ಕಾರ್ಯಕ್ರಮ ಮಾಡದಂತೆ ಒತ್ತಡ ಹೇರಲಾಗುತ್ತಿದೆ. ಅಭಿಯಾನದಲ್ಲಿ ತೊಡಗಿರುವವರಿಗೆ ಬೆದರಿಕೆಗಳು ಬರುತ್ತಿವೆ. ಇದರ ಹೊರತಾಗಿಯೂ, ಸುಮಾರು 500 ಜನರನ್ನು ಹಿಂದೂ ಧರ್ಮಕ್ಕೆ ಹಿಂದಿರುಗಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.