ಭೋಪಾಲ್: ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಪಕ್ಷಗಳು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಆರ್ಥಿಕ ಸುಧಾರಣೆ ತರಲು ಉತ್ಸುಹುಕವಾಗಿವೆ ಆದರೆ ಕಾಂಗ್ರೆಸ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅವರು ಗುರುವಾರ ಭೋಪಾಲ್ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಕಾಂಗ್ರೆಸ್ ನಮ್ಮೊಂದಿಗೆ ಸೇರಿ ಕಾರ್ಯ ಮಾಡುತ್ತದೆ, ಸಂಸತ್ತಿನಲ್ಲಿ ಸುಧಾರಣೆ ತರಲು ಸಹಾಯ ಮಾಡುತ್ತದೆ ಎಂದು ನಂಬಿದ್ದೆವು, ಆದರೆ ಆ ಪಕ್ಷಕ್ಕೆ ನಮ್ಮೊಂದಿಗೆ ಸೇರಿ ಕಾರ್ಯ ಮಾಡುವ ಇಚ್ಛೆಯೇ ಇಲ್ಲ. ಮಹತ್ವದ ಸಾಮಾಜಿಕ ವಿಷಯಗಳ ಮೇಲಿನ ಚರ್ಚೆಯನ್ನೂ ಅದು ನಿರ್ಲಕ್ಷ್ಯಿಸುತ್ತಿದೆ’ ಎಂದಿದ್ದಾರೆ.
ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಿರಿ, ಆರ್ಥಿಕ ಸುಧಾರಣೆಗೆ ಕೈಜೋಡಿಸಿ, ನಮ್ಮೊಂದಿಗೆ ಕಾರ್ಯ ಮಾಡಿ ಎಂದು ದೇಶದ ಜನತೆಯಿಂದ ತಿರಸ್ಕರಿಸಲ್ಪಟ್ಟವರಲ್ಲಿ ನಾನು ವಿನಂತಿಸುತ್ತೇನೆ ಎನ್ನುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದರು.
‘ಗೆದ್ದ ಪಕ್ಷಗಳು ಜನರ ನಿರೀಕ್ಷೆಯನ್ನು ತಲುಪಲು ಪ್ರಯತ್ನಿಸಬೇಕು, ಸೋತವರು ಪರಾಮರ್ಶೆ ಮಾಡಿಕೊಳ್ಳಬೇಕು. ನಾವು 1984ರಲ್ಲಿ ಸೋತೆವು. ಸೋಲಿನ ಪರಾಮರ್ಶೆ ನಡೆಸಿದವು, ಸೋಲಿನಿಂದ ಪಾಠ ಕಲಿಯುವ ಪ್ರಯತ್ನ ಮಾಡಿದೆವು. ಆದರೆ ನಾವೆಂದು ಬೇರೆಯವರನ್ನು ಟೀಕಿಸಲಿಲ್ಲ, ನಮ್ಮ ತಪ್ಪನ್ನು ತಿದ್ದಿಕೊಂಡೆವು. ಇಂದು, ಲೋಕಸಭೆಯಲ್ಲಿ ಜನತೆಗೆ ನಮಗೆ ಬಹುಮತ ನೀಡಿದ್ದಾರೆ’ ಎಂದರು.
ಒಂದು ಕಾಲದಲ್ಲಿ ಲೋಕಸಭೆಯಲ್ಲಿ ಬಿಜೆಪಿಯ ಇಬ್ಬರು ಸಂಸದರಿದ್ದರು, ಆಗ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಮ್ಮ ಬಗ್ಗೆ ಹಾಸ್ಯ ಮಾಡುತ್ತಿದ್ದರು. ನಾವು ಅದನ್ನು ಕೇಳುತ್ತಿದ್ದೆವು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.