ಬಿಹಾರ : ಬಿಹಾರ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರಕಾರ ರಚಿಸುವುದೋ ಇಲ್ಲವೋ ಎಂದು ಹೇಳಲಾಗದು, ಆದರೆ ಬಿಹಾರದ ರಾಜಕಾರಣದಲ್ಲಿ ಅದು ಮುಖ್ಯ ಪಾತ್ರವಹಿಸಲಿದೆ ಎಂದು ಆಪ್ ಪಕ್ಷದ ಮಾಜಿ ಮುಖಂಡ ಯೋಗೇಂದ್ರ ಯಾದವ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಏಕಾಂಗಿ ಹೋರಾಟ ನಡೆಸುತ್ತಿದ್ದು ಉಳಿದ ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿಯ ವಿರುದ್ಧ ಸೆಣಸಾಡುತ್ತಿದೆ. ಇದು ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ಹೋರಾಟವಾಗಿ ಬದಲಾಗಿದೆ. ಅಲ್ಲದೇ ಈ ಬಾರಿ ಬಿಜೆಪಿ ಬಿಹಾರದಲ್ಲಿ ಬಹುಮುಖ್ಯ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದ್ದಾರೆ.
ರಾಜಕೀಯದ ಲೆಕ್ಕಾಚಾರದಂತೆ ಕಳೆದ ಎರಡು ದಶಕಗಳಲ್ಲಿ ಸಾಮಾಜಿಕ ನ್ಯಾಯದ ಪರಿಭಾಷೆ ಬದಲಾಗಿದೆ. ಆರ್.ಜೆ.ಡಿ ಮುಖಂಡ ಲಾಲುಪ್ರಸಾದ್ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಅವರ ಆಡಳಿತ ವೈಖರಿಯಿಂದಾಗಿ ಈ ಹಿಂದೆ ಕಾಂಗ್ರೇಸ್ ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಂತೆ ಈಗ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಹೇಳಿದರು.
ಬಿಹಾರದ ಜನರ ಮನಸ್ಧಿತಿ ಬದಲಾಗಿದ್ದು ಬಿಹಾರ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ. ಆರ್.ಜೆ.ಡಿ ಮುಖಂಡ ಲಾಲುಪ್ರಸಾದ್ ಯಾದವ್ ಅವರ ಮೊದಲ ಸರಕಾರ ಅಭಿವೃದ್ಧಿ ಮಾಡಿದ್ದು ನಂತರದ ಸರಕಾರಗಳು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ.ಅಲ್ಲದೇ ಇದು ಸಾಮಾಜಿಕ ನ್ಯಾಯ ಒದಗಿಸುವಲ್ಲಿಯೂ ವಿಫಲವಾದ ಕಾರಣ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ನುಡಿದರು.
ಇದೇ ಸಂದರ್ಭ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಟೀಕೆಮಾಡಿದ್ದು, ಅತೀ ಅಲ್ಪ ಸಮಯದಲ್ಲಿ ರಾಜಕೀಯದಲ್ಲಿ ಹೆಸರುಗಳಿಸಲು ತುರಾತುರಿ ರಾಜಕೀಯ ನಡೆಗಳನ್ನಿಡುತ್ತಿದ್ದಾರೆ. ಇದಕ್ಕವರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದರು.ಅಂತೂ ಬಿಹಾರ್ ರಾಜಕೀಯ ರಣರಂಗವಾಗಿದ್ದು ಗದ್ದುಗೆಗಾಗಿ ಗುದ್ದಾಟ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.