ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರು ಆರ್ಎಸ್ಎಸ್ ಮುಖಂಡರನ್ನು ಭೇಟಿಯಾಗಿದ್ದು, ಸಭೆ ನಡೆಸಿದ್ದು ಭಾರೀ ಸುದ್ದಿಯಾಗಿದೆ. ಶೀನಾ ಬೋರ ಪ್ರಕರಣ ಮತ್ತು ಬಿಜೆಪಿ-ಆರ್ಎಸ್ಎಸ್ ಸಭೆಯ ಸುದ್ದಿಯನ್ನು ಬಿಟ್ಟರೆ ದೇಶದಲ್ಲಿ ಬೇರೆ ಯಾವ ಸುದ್ದಿಯೂ ಇಲ್ಲ ಎಂಬಂತೆಯೇ ಮಾಧ್ಯಮಗಳು ವರ್ತಿಸಿದವು. ಪ್ರತಿಪಕ್ಷಗಳಂತೂ ಮೋದಿ ಆರ್ಎಸ್ಎಸ್ ಕೈಗೊಂಬೆಯಾಗಿದ್ದಾರೆ, ಆರ್ಎಸ್ಎಸ್ ಆದೇಶದಂತೆ ಸರ್ಕಾರ ನಡೆಯುತ್ತಿದೆ. ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದೇ ಬೊಬ್ಬಿಟ್ಟವು.
ಆರ್ಎಸ್ಎಸ್ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ, ಮೋದಿ ಸೇರಿದಂತೆ ಬಹುತೇಕ ಸಚಿವರುಗಳು ಆರ್ಎಸ್ಎಸ್ ಗರಡಿಯಲ್ಲಿ ಪಳಗಿ ಬಂದವರು. ಆದರೆ ಆರ್ಎಸ್ಎಸ್ ಎಂದಿಗೂ ಸರ್ಕಾರದ ಆಡಳಿತದಲ್ಲಿ ತಲೆ ಹಾಕುವುದಿಲ್ಲ. ಸರ್ಕಾರದ ಯೋಜನೆಗಳಾದ ಗಂಗಾ ಶುದ್ಧೀಕರಣ, ಮಾತೃಭಾಷಾ ಶಿಕ್ಷಣ, ಮುಂತಾದುವುಗಳ ಬಗ್ಗೆ, ಹೀಗೆ ಸಾಂಸ್ಕೃತಿಕವಾಗಿ ಭಾರತದ ಅಭ್ಯುದಯವಾಗುವಂತಹ ವಿಷಯಗಳನ್ನು ಚರ್ಚಿಸಲಾಗುತ್ತದೆಯೇ ಹೊರತು ರಾಜಕೀಯ, ಅಥವಾ ಸರ್ಕಾರವನ್ನು ಕೈಗೊಂಬೆಯಂತೆ ಆಡಿಸುವುದು ಆರ್ಎಸ್ಎಸ್ನಲ್ಲಿ ಇಲ್ಲ.
ಈ ಹಿಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಕ್ರೈಸ್ಥರ ಪರಮೋಚ್ಛ ಧರ್ಮಗುರು ಪೋಪ್ರನ್ನು ಆಗಾಗ ಭೇಟಿಯಾಗುತ್ತಿದ್ದರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಮುಸ್ಲಿಂ ಧರ್ಮಗುರು ಇಮಾಮ್ರನ್ನು ಭೇಟಿಯಾಗಿದ್ದಾರೆ. ಇವುಗಳು ದೊಡ್ಡ ಸುದ್ದಿಯಾಗಿಲ್ಲ ಅಥವಾ ಯಾರೂ ಟೀಕೆಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ ಮೋದಿ ಆರ್ಎಸ್ಎಸ್ ಮುಖಂಡರನ್ನು ಭೇಟಿಯಾಗುವುದು ದೊಡ್ಡ ಪ್ರಜಾಪ್ರಭುತ್ವ ವಿರೋಧಿ ಕಾರ್ಯ ಎಂದೇ ಬಣ್ಣಿಸಲಾಗುತ್ತದೆ. ಇದು ಯಾಕೆ ಎಂಬುದು ಇನ್ನೂ ಅರ್ಥವಾಗದ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.