ಮಂಗಳೂರು: ಐಟಿ ಉದ್ಯೋಗವನ್ನು ತೊರೆದು ಕತ್ತೆ ಸಾಕಾಣಿಕೆ ಮಾಡಿ ಯಶಸ್ಸನ್ನು ಕಾಣುವ ಮೂಲಕ ಬಂಟ್ವಾಳದ ಇರಾ ಗ್ರಾಮದ ಪರ್ಲೆಡ್ಕದ ಶ್ರೀನಿವಾಸ್ ಗೌಡ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
ಕತ್ತೆ ಹಾಲು ಶ್ರೇಷ್ಠವಾದ ಪೌಷ್ಟಿಕ ಅಂಶಗಳನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಇದರ ಹಾಲು ಬಹಳ ದುಬಾರಿಯೂ ಹೌದು. ಐಟಿ ಉದ್ಯೋಗವನ್ನು ತೊರೆದು ಕತ್ತೆ ಸಾಕಾಣಿಕೆ ಆರಂಭಿಸಿರುವ ಶ್ರೀನಿವಾಸ್ ಗೌಡ ಅವರು ಇದೀಗ ಕೈತುಂಬ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.
ಮಾತ್ರವಲ್ಲದೆ, ದೇಶದ ಎರಡನೇ ಹಾಗೂ ಕರ್ನಾಟಕದ ಮೊದಲ ಬೃಹತ್ ಕತ್ತೆ ಸಾಕಾಣಿಕೆ ಹಾಗೂ ಮಾದರಿ ತರಬೇತಿ ಕೇಂದ್ರವನ್ನು ಇವರು ಆರಂಭಿಸಿದ್ದಾರೆ.
20 ಕತೆಗಳ ಮೂಲಕ ಕೇಂದ್ರವನ್ನು ಆರಂಭಿಸಲಾಗಿದೆ. ಶ್ರೀನಿವಾಸ್ ಗೌಡ ಅವರ ಐಸಿರಿ ಫಾರ್ಮ್ ಕೃಷಿ ಮತ್ತು ಪಶು ಸಂಗೋಪನೆ, ಪಶು ವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಾಚರಿಸುತ್ತದೆ.
ರಾಮನಗರ ಮೂಲದ ಶ್ರೀನಿವಾಸ್ ಗೌಡ ಅವರ ಕೇಂದ್ರದಲ್ಲಿ 20 ಕತ್ತೆಗಳು ಇವೆ. ಇವುಗಳ ಪೈಕಿ 12 ಕತ್ತೆಗಳು ಹಾಲು ಕೊಡುತ್ತಿವೆ. ಒಂದು ಕತ್ತೆ ಸಾಧಾರಣ ಅರ್ಧ ಲೀಟರ್ ಹಾಲು ಕೊಡುತ್ತದೆ. ನಿತ್ಯ ಆರರಿಂದ ಏಳು ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರ ಜೊತೆಗೆ ಕೋಳಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಕೂಡ ಅವರು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.