ಮುಂಬಯಿ: ನಮ್ಮ ದೇಶದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ, ಆದರೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾಮಿಸುವ ಹೃದಯವಂತಿಕೆ ಇರುವ ಶ್ರೀಮಂತರ ಕೊರತೆಯಿದೆ. ಆದರೆ ಬಾಲಿವುಡ್ ನಟ ನಾನಾ ಪಾಟೇಕರ್ ಈ ಕೊರತೆಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ತಮ್ಮಿಂದಾದಷ್ಟು ಹಣವನ್ನು ನೀಡಿದ್ದಾರೆ.
ಬರದಿಂದಾಗಿ ಮಹಾರಾಷ್ಟ್ರದ ಲಾಥೂರ್ ಮತ್ತು ಒಸ್ಮಾನ್ಬಾದ್ನಲ್ಲಿ 113 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕುಟುಂಬಗಳು ಅಕ್ಷರಶಃ ಬೀದಿ ಪಾಲಾಗಿವೆ. ಈ ಎಲ್ಲಾ ಕುಟುಂಬಗಳಿಗೆ ತಲಾ 15 ಸಾವಿರದಂತೆ ನಾನಾ ಹಣಕಾಸು ನೆರವು ನೀಡಿದ್ದಾರೆ.
ಬರ ಎಂಬುದು ಪ್ರಾಕೃತಿಕ ವಿಪತ್ತು, ಇದನ್ನು ಒಂದು ಪಕ್ಷದಿಂದ ನಿವಾರಿಸಲು ಸಾಧ್ಯವಿಲ್ಲ. ಶರದ್ ಪವಾರ್, ನಾರಾಯಣ್ ರಾಣೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಒಗ್ಗಟ್ಟಾಗಿ ಈ ಸಮಸ್ಯೆಯ ವಿರುದ್ಧ ಹೋರಾಡಬೇಕು ಎಂದು ನಾನಾ ಕಿವಿ ಮಾತು ಹೇಳಿದ್ದಾರೆ.
ಅಲ್ಲದೇ ರೈತರಿಗಾಗಿ ಹಲವಾರು ಮಂದಿ ತಮ್ಮಿಂದಾದ ಸಹಾಯವನ್ನು ಮಾಡಿದ್ದಾರೆ. ನಾವು ಕೇವಲ ಪೋಸ್ಟ್ಮ್ಯಾನ್ಗಳು ಎಂದು ಅವರು ಹೇಳಿಕೊಂಡಿದ್ದಾರೆ.
ಪಾಟೇಕರ್ ಮತ್ತು ಅನ್ಸುಪುರೆ ಎಂಬುವವರು ರೈತರಿಗಾಗಿ ಅಭಿಯಾನವನ್ನು ಆರಂಭಿಸಿದ್ದರು, ಆ ಅಭಿಯಾನದ ಮೂಲಕ ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳ ಈಡೇರಿಕೆಗೆ ಶ್ರಮಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.