ಮುಂಬಯಿ : ಭಗವಾನ್ ಶ್ರೀಕೃಷ್ಣನಜನ್ಮೋತ್ಸವ ಮುಂಬಯಿ ಮಹಾನಗರದಾದ್ಯಂತ ಸಂಭ್ರಮಿಸಿದ್ದು, ಬಿಎಸ್ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ಗಳು ಭಾನುವಾರ ಸಯಾನ್ನ ಗೋಕುಲದಲ್ಲಿ ಶ್ರೀಕೃಷ್ಣಷ್ಟಮಿಯನ್ನು ಸಂಪ್ರದಾಯಿಕವಾಗಿ ವಿಜೃಂಭನೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಗೋಕುಲ ಭಜನಾ ಮಂಡಳಿಯ ಮಂಗಳಗೀತೆಯೊಂದಿಗೆ `ಅಖಂಡ ಹರಿನಾಮ ಸಂಕೀರ್ತನೆ’ ಸಂಪ ನ್ನಗೊಂಡ ಬಳಿಕ ಪೂಜಾಧಿಗಳನ್ನು ನೆರವೇರಿಸಲಾಯಿತು. ಅಪರಾಹ್ನ ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ ದಿವ್ಯೋಪಸ್ಥಿತಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ (ಮೊಸರು ಕುಡಿಕೆ) ಸಂಭ್ರಮಿಸಲ್ಪಟ್ಟಿತು. ಅಷ್ಟಮಿ ಕರಿವೇಷ. ಬಣ್ಣ ಬಣ್ಣದ ಹುಲಿವೇಷ, ಕೀಲು ಕುದುರೆ ಕುಣಿತ, ಭಜನಾ ಮಂಡಳಿಗಳ ಕೋಲಾಟ, ಲೇಜಿಮ್ ಇತ್ಯಾದಿ ಸಂಸ್ಕೃತಿ ಸಾರುವ ವೈಶಿಷ್ಟ್ಯಮಯ ಸಡಗರ, ವೈಭವೋರ್ಣಿತ ಮೆರವಣಿಗೆಯೊಂದಿಗೆ ಶ್ರೀಕೃಷ್ಣಷ್ಟಮಿ ಆಚರಿಸಲ್ಪಟ್ಟಿತು. ಶ್ರದ್ಧೆ, ಭಕ್ತಿ ಮತ್ತು ಉತ್ಸವದಿಂದ ಆಚರಿಸಿದ್ದು, ಮಹಾರಾಷ್ಟ್ರ ರಾಜ್ಯದ ಜಗತ್ಪ್ರಸಿದ್ಧ ‘ದಹಿ ಹಂಡಿ’ ಸಂಭ್ರಮವೂ ಗೋವಿಂದ ಆಲಾರೆ ಆಲಾ… ಗೀತೆಯೊಂದಿಗೆ ಆಚರಿಸಲಾಯಿತು. ಸುಮಾರು 52 ಅಡಿಗಳಷ್ಟು ಬಾನೆತ್ತರಕ್ಕೆ ಕಟ್ಟಲಾದ ‘ದಹಿ ಹಂಡಿ’ಯನ್ನು ಬಿ.ಆರ್ ಶೆಟ್ಟಿ ತಂಡವು ಸುಮಾರು 8 ವಿಸ್ತ್ತಾರಣದ ಮಾನವ ಪಿರಮಿಡ್ ನಿರ್ಮಿಸಿ ‘ಹಂಡಿ’ ಒಡೆದು ಅತ್ಯಾಕರ್ಷಕ ಬಹುಮಾನ, ನಗದು ತನ್ನದಾಗಿಸಿತು.
ಸಂಜೆ ನಡೆಸಲ್ಪಟ್ಟ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಗೋಕುಲವಾಣಿ ಮಾಸಿಕದ `ಗೋಕುಲಾಷ್ಟಮಿ ವಿಶೇಷಾಂಕ’ ಹಾಗೂ `ಗೋಕುಲದ ಯೋಜನೆಗಳು ನಮ್ಮಗುರಿ-2020’ರ ವೆಬ್ಸೈಟ್ನ್ನು ಅನಾವರಣ ಗೊಳಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಆಡಳಿತ ನಿರ್ದೇಶಕ ಪ್ರದೀಪ್ ಕುಮಾರ್, ಸಮಾಜ ಸೇವಕ ಎಂ.ಹೆಚ್ ಮುರಳೀಧರ್, ಬಿಎಸ್ಕೆಬಿ ಅಸೋಸಿ ಯೇಶನ್ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಕಾರ್ಯದರ್ಶಿ ಎ.ಎಸ್ ರಾವ್, ಗೋಕುಲವಾಣಿ ಮಾಸಿಕದ ಸಂಪಾದಕ ಡಾ| ವ್ಯಾಸರಾಯ ನಿಂಜೂರು ಉಪಸ್ಥಿತರಿದ್ದರು.
ಪುತ್ತಿಗೆಶ್ರೀ ಸ್ವಾಮೀಜಿ ಅವರು ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿ ಗೋಕುಲ ಎಂದರೆ ಕೃಷ್ಣ ಗೋಪಾಲಕರನ್ನು ರಕ್ಷಿಸಿದ ಸ್ಥಳ. ಅಂತೆಯೇ ಈ ಗೋಕುಲ ಹಲವಾರು ದಶಕಗಳಿಂದ ಮಹಾನಗರಿ ಮುಂಬಯಿಯಲ್ಲಿ ಸಾಮಾಜಿಕ, ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರೀ ಕೃಷ್ಣನ ಸಂದೇಶವನ್ನು ಪ್ರಸರಿಸುತ್ತಿರುವುದು ಅಭಿನಂದನೀಯ. ಶ್ರೀಕೃಷ್ಣ ಲೀಲೋತ್ಸವ ಎಂದರೆ ಸಂತೋಷ ಮತ್ತು ಸಮೃದ್ಧಿ ಸಾರುವ ಕೂಟವಾಗಿದೆ. ಈ ಶುಭಾವಸರದಲ್ಲಿ ನಿಮ್ಮ ಸಂಸ್ಥೆಯು ಹಮ್ಮಿಕೊಂಡಿರುವ ಗೋಕುಲ ವ್ಹಿಜನ್ ಭವ್ಯ ಯೋಜನೆಗಳು ಶೀಘ್ರವೇ ಸಂಪನ್ನಗೊಳ್ಳಲಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಯಕ್ಷ ಮಹಿಳಾ ಬಳಗ, ಗಿಳಿಯಾರು ಉಡುಪಿ ತಂಡವು `ಕಂಸ ದಿಗ್ವಿಜಯ-ಕಂಸ ವಧೆ’ ಯಕ್ಷಗಾನ ಪ್ರದರ್ಶಿಸಿದ್ದು, ರಾತ್ರಿ ಶ್ರೀಕೃಷ್ಣ ದೇವರ ಪವಿತ್ರ್ಯ ಸಾನಿಧ್ಯದಲ್ಲಿ ಪ್ರಧಾನ ಅರ್ಚಕ ಹರಿಭಟ್ ಪೂಜೆ ನೆರವೇರಿಸಿ ಶ್ರೀದೇವರಿಗೆ ಪೂಜೆ, ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಬಿ.ಆರ್ ಶೆಟ್ಟಿ ಮತ್ತು ಶ್ರೀಮತಿ ಚಂಚಲ ಆರ್.ಶೆಟ್ಟಿ ದಂಪತಿ, ಕಾನೂನು ತಜ್ಞ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಬಿ.ರಮಾನಂದ ರಾವ್, ಅಸೋಸಿಯೇಶ ನ್ನ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ಮತ್ತಿತರ ಪದಾಧಿಕಾರಿಗಳ, ಸದಸ್ಯರು, ಭಕ್ತರು ಉಪಸ್ಥಿತರಿದ್ದು, ಪ್ರೇಮಾ ಎಸ್.ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೋತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪಿ.ಸಿ.ಎನ್ ರಾವ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.