ಶ್ರೀನಗರ: ಆದಿ ಶಂಕರಾಚಾರ್ಯರ ಭೇಟಿಯನ್ನು ಸ್ಮರಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಐದು ದಿನಗಳ ವೈದಿಕ ಸ್ತೋತ್ರಗಳ ಪಠಣ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ.
ಕಾರ್ಯಕ್ರಮವನ್ನು ನಾಗರಿಕ ಆಡಳಿತ ಮತ್ತು ಕಾಶ್ಮೀರಿ ಹಿಂದೂಗಳ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳ ಬೆಂಬಲದೊಂದಿಗೆ ‘ಒನ್ ಇಂಡಿಯಾ ಸ್ಟ್ರಾಂಗ್ ಇಂಡಿಯಾ’ ಆಯೋಜಿಸಿದೆ.
ಕಣಿವೆಯಲ್ಲಿ ಅನಿಶ್ಚಿತ ಭದ್ರತಾ ಪರಿಸ್ಥಿತಿಯ ಹೊರತಾಗಿಯೂ, ಈ ವರ್ಷ ದಾಲ್ ಸರೋವರದ ಮೇಲಿರುವ ಪುರಾತನ ಶಂಕರಾಚಾರ್ಯ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ದಕ್ಷಿಣ ಭಾರತದ ಸುಮಾರು 200 ಸಂತರು ಶ್ರೀನಗರದಲ್ಲಿ ಬೀಡು ಬಿಟ್ಟಿದ್ದಾರೆ.
“ಕಾರ್ಯಕ್ರಮವನ್ನು ದೊಡ್ಡ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಇದು ಮಹಾನ್ ಸಂತನಿಗೆ ಸೂಕ್ತವಾದ ಗೌರವವಾಗಿದೆ. ಶಂಕರಾಚಾರ್ಯರ ಕಾಶ್ಮೀರ ಭೇಟಿಯು ಹಿಂದೂ ಧರ್ಮದ ತಾತ್ವಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆ ನೀಡಿತು. ಕಾಶ್ಮೀರದಲ್ಲಿ ಅವರು ವಿದ್ವಾಂಸರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು” ಎಂದು ಕಾರ್ಯಕ್ರಮದ ಆಯೋಜಕಿ ವಿಧು ಶರ್ಮಾ ಹೇಳಿದ್ದಾರೆ.
ಕಾಶ್ಮೀರವು ಸಾವಿರಾರು ವರ್ಷಗಳಿಂದ ವೈದಿಕ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಕೇರಳದಿಂದ ಬಂದ ಆದಿ ಶಂಕರಾಚಾರ್ಯರು ಜಮ್ಮು-ಕಾಶ್ಮೀರದಾದ್ಯಂತ ಪ್ರವಾಸ ಮಾಡಿದರು. ಭಾರತೀಯ ಉಪಖಂಡದಲ್ಲಿ ಬೌದ್ಧ ಧರ್ಮವು ಪ್ರಬಲವಾದ ಧರ್ಮವಾಗಿದ್ದಾಗ ಶಂಕರಾಚಾರ್ಯರು ವೇದಾಂತ ತತ್ತ್ವಶಾಸ್ತ್ರವನ್ನು ಜನಪ್ರಿಯಗೊಳಿಸಿದರು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.